ADVERTISEMENT

ಆಪರೇಷನ್ ಗ್ರೀನ್ ವ್ಯಾಪ್ತಿಗೆ ಅನಾನಸ್

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 14:02 IST
Last Updated 18 ಜುಲೈ 2020, 14:02 IST

ಶಿರಸಿ: ಕೇಂದ್ರ ಸರ್ಕಾರದ ಆಪರೇಷನ್ ಗ್ರೀನ್ ಯೋಜನೆಯು ಜಿಲ್ಲೆಯಲ್ಲಿ ಪ್ರಾರಂಭವಾಗಿದೆ. ಈ ಯೋಜನೆಯು ಜೂನ್ 16ರಿಂದ ಆರು ತಿಂಗಳುಗಳವರೆಗೆ ಜಾರಿಯಲ್ಲಿರುತ್ತದೆ.

ಈ ಯೋಜನೆಯ ಅವಧಿಯಲ್ಲಿ ಜಿಲ್ಲೆಯಿಂದ ದೂರದ ಮಾರುಕಟ್ಟೆಗೆ ಅನಾನಸ್ ಹಣ್ಣು ಸಾಗಾಟ ಮಾಡಿದ್ದಲ್ಲಿ, ಪ್ರತಿ ಟನ್ ಅನಾನಸ್‌ಗೆ, ಕಿಲೋ ಮೀಟರ್‌ವೊಂದಕ್ಕೆ ₹ 2.84, ಘಟಕ ವೆಚ್ಚಕ್ಕೆ ಶೇ 50ರ ಸಹಾಯಧನ, ಶೀತಲ ವಾಹನಕ್ಕೆ ಪ್ರತಿ ಟನ್‌ಗೆ ಕಿ.ಮೀ.ವೊಂದಕ್ಕೆ ₹ 5, ಘಟಕ ವೆಚ್ಚಕ್ಕೆ ಶೇ 50ರ ಸಹಾಯಧನ ಲಭ್ಯವಿದೆ. ರೈತ ಉತ್ಪಾದಕ ಸಂಸ್ಥೆಗಳು, ಸಹಕಾರ ಸಂಘಗಳು, ರೈತರಿಗೆ ಕನಿಷ್ಠ 100 ಟನ್ ಸಾಗಾಣಿಕೆ, ಕನಿಷ್ಠ 100 ಕಿ.ಮೀ, ಸಂಸ್ಕರಣಾ ಘಟಕ ಹೊಂದಿದವರು, ರಫ್ತುದಾರರು, ಲೈಸೆನ್ಸ್ ಹೊಂದಿರುವ ಕಮಿಷನ್ ಏಜೆಂಟರಿಗೆ ಕನಿಷ್ಠ 500 ಟನ್ ಸಾಗಾಣಿಕೆ, ಕನಿಷ್ಠ 100 ಕಿ.ಮೀ, ರಾಜ್ಯ ಮಾರಾಟ ಮಂಡಳಿ, ಚಿಲ್ಲರೆ ವ್ಯಾಪಾರಿಗಳಿಗೆ ಕನಿಷ್ಠ 1000 ಟನ್ ಸಾಗಾಣಿಕೆ, ಕನಿಷ್ಠ 250 ಕಿ.ಮೀ ದೂರ ನಿಗದಿಪಡಿಸಲಾಗಿದೆ.

ಒಬ್ಬ ಅರ್ಜಿದಾರರಿಗೆ ಗರಿಷ್ಠ ಸಹಾಯಧನದ ಮೊತ್ತ ₹ 1 ಕೋಟಿ ಆಗಿದೆ. ಸಾಗಾಣಿಕೆ ಮಾಡಿದ ಮೂರು ತಿಂಗಳು ದಾಟಿದವರು ಅರ್ಜಿ ನೀಡುವ ಅರ್ಹತೆ ಹೊಂದಿರುವುದಿಲ್ಲ. ಈ ಸೌಲಭ್ಯವನ್ನು https://www.sampada-mofpi.gov.in/ Login.aspx ಇಲ್ಲಿ ನೋಂದಾಯಿಸಿ, ಪಡೆಯಬಹುದು. ಹೆಚ್ಚಿನ ಮಾಹಿತಿಗೆ MoFPI (Ministry of Food Processing Industries) ಜಾಲತಾಣದ ಅಡಿಯಲ್ಲಿ ಆತ್ಮ ನಿರ್ಭರ್ ಭಾರತ ಘಟಕದಡಿಯಲ್ಲಿ ಪಡೆಯಬಹುದು ಅಥವಾ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದು ತೋಟಗಾರಿಕಾ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.