ADVERTISEMENT

ಮರದಿಂದ ಬಿದ್ದು ಕೊನೆಗೌಡ ಸಾವು

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 14:32 IST
Last Updated 20 ಡಿಸೆಂಬರ್ 2019, 14:32 IST

ಶಿರಸಿ: ತಾಲ್ಲೂಕಿನ ಕುಳವೆಯಲ್ಲಿ ಶುಕ್ರವಾರ ಅಡಿಕೆ ಮರ ಹತ್ತಿ ಗೊನೆ ಕೊಯ್ಯುತ್ತಿದ್ದ ಕೊನೆಗೌಡರೊಬ್ಬರು ಆಯತಪ್ಪಿ ಕೆಳಗೆ ಬಿದ್ದು, ಮೃತಪಟ್ಟಿದ್ದಾರೆ. ವಿಷ್ಣು ನಾರಾಯಣ ನಾಯ್ಕ (68) ಮೃತ ವ್ಯಕ್ತಿ. ಮಂಜುನಾಥ ಭಟ್ಟ ಅವರ ತೋಟದಲ್ಲಿ ಅಡಿಕೆ ಕೊಯ್ಯಲು ಮರ ಹತ್ತಿದ ಸಂದರ್ಭದಲ್ಲಿ ಬಿದ್ದು ಅವರು ಸ್ಥಳದಲ್ಲಿಯೇ ಮೃತಪಟ್ಟರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.