ಶಿರಸಿ: ತಿಂಗಳ ಸಂಬಳ ವಿಳಂಬವಾದ ಕಾರಣ ಪೌರಕಾರ್ಮಿಕರು ಬುಧವಾರ ಇಲ್ಲಿ ನಗರಸಭೆ ಎದುರು ಪ್ರತಿಭಟನೆ ನಡೆಸಿದರು. ಸ್ವಚ್ಛತಾ ಕಾರ್ಯಕ್ಕೆ ಬಳಸುವ ಎಲ್ಲ ವಾಹನಗಳನ್ನು ನಗರಸಭೆ ಎದುರು ತಂದು ನಿಲ್ಲಿಸಿ, ಅಸಮಾಧಾನ ವ್ಯಕ್ತಪಡಿಸಿದರು.
‘ನವೆಂಬರ್ 20 ಕಳೆದರೂ, ಹಿಂದಿನ ತಿಂಗಳ ಸಂಬಳ ಖಾತೆಗೆ ಜಮಾ ಆಗಿಲ್ಲ. ಕೈಗಡ ಸಾಲ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಸಂಬಳಬಾರದೇ ತೊಂದರೆಯಾಗಿದೆ’ ಎಂದು 50ಕ್ಕೂ ಹೆಚ್ಚು ಪೌರಕಾರ್ಮಿಕರು ಆರೋಪಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಪೌರಾಯುಕ್ತ ರಮೇಶ ನಾಯಕ ಅವರು, ತಾಂತ್ರಿಕ ಸಮಸ್ಯೆ ಬಗೆಹರಿಸಿ, ಆದಷ್ಟು ಶೀಘ್ರ ಸಂಬಳ ನೀಡಲಾಗುವುದು ಎಂದು ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.