ADVERTISEMENT

ಕಲ್ಲೇಶ್ವರ: ದಿನಸಿ ವಿತರಣೆ, ಆರೋಗ್ಯ ತಪಾಸಣೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 15:15 IST
Last Updated 25 ಜುಲೈ 2021, 15:15 IST
ನೆರೆಪೀಡಿತ ಕಲ್ಲೇಶ್ವರ ಗ್ರಾಮದಲ್ಲಿ ಐ.ಎಂ.ಎ. ಶಿರಸಿ ಘಟಕದ ವತಿಯಿಂದ ಸ್ಥಳೀಯರ ಆರೋಗ್ಯ ತಪಾಸಣೆ ನಡೆಸಲಾಯಿತು.
ನೆರೆಪೀಡಿತ ಕಲ್ಲೇಶ್ವರ ಗ್ರಾಮದಲ್ಲಿ ಐ.ಎಂ.ಎ. ಶಿರಸಿ ಘಟಕದ ವತಿಯಿಂದ ಸ್ಥಳೀಯರ ಆರೋಗ್ಯ ತಪಾಸಣೆ ನಡೆಸಲಾಯಿತು.   

ಶಿರಸಿ: ನೆರೆ ಹಾವಳಿಗೆ ತುತ್ತಾಗಿರುವ ಯಲ್ಲಾಪುರ ತಾಲ್ಲೂಕಿನ ಕಲ್ಲೇಶ್ವರ ಭಾಗದಲ್ಲಿ ಸ್ವರ್ಣವಲ್ಲಿ ಶ್ರೀ ಮಾರ್ದರ್ಶನದಂತೆ ಹವ್ಯಕ ಜಾಗೃತ ಕಾರ್ಯಪಡೆಯ ನೇತೃತ್ವದಲ್ಲಿ ಭಾನುವಾರ ದಿನಸಿ ವಿತರಣೆ ಹಾಗೂ ಐ.ಎಂ.ಎ.ಶಿರಸಿ ಘಟಕದ ನೇತೃತ್ವದಲ್ಲಿ ಆರೋಗ್ಯ ತಪಾಸಣೆ ಕಾರ್ಯ ನಡೆಯಿತು.

ಹೆಗ್ಗಾರ್, ವೈದ್ಯಹೆಗ್ಗಾರ್, ಕಲ್ಲೇಶ್ವರ, ಕೋನಾಳ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳ ಜನರಿಗೆ ನೆರವು ನೀಡಲಾಯಿತು. ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದ ನಡುವೆಯೂ ಸ್ವಯಂ ಸೇವಕರು ಗ್ರಾಮಗಳಿಗೆ ತೆರಳಿದ್ದರು.

ಹವ್ಯಕ ಜಾಗೃತ ಕಾರ್ಯಪಡೆ ಸಂಚಾಲಕ ಸಚ್ಚಿದಾನಂದ ಹೆಗಡೆ, ರಾಘವ ಭಟ್ಟ ಹಿತ್ಲಳ್ಳಿ, ಸತ್ಯನಾರಾಯಣ ಭಟ್ಟ ವರ್ಗಾಸರ, ಗಣಪತಿ ಮೂಲೆಮನೆ, ಪ್ರಶಾಂತ ಹೆಗ್ಗಾರ, ಗ್ರಾಮ ಪಂಚಾಯ್ತಿ ಸದಸ್ಯ ನಾರಾಯಣ ಭಟ್ಟ ಇತರರು ಇದ್ದರು.

ADVERTISEMENT

ಡಾ.ದಿನೇಶ ಹೆಗಡೆ,‌ ಡಾ. ಸುಮನ್ ಹೆಗಡೆ, ಡಾ.ರವಿಕಿರಣ ಪಟವರ್ಧನ, ಡಾ. ಮಧುಕೇಶ್ವರ ಜಿ. ವಿ., ಡಾ.ಜಿ.ಎಮ್.ಹೆಗಡೆ, ಡಾ.ಕೃಷ್ಣಮೂರ್ತಿ ರಾಯ್ಸದ್, ಡಾ.ವಿಕ್ರಮ್ ಹೆಗಡೆ, ಡಾ.ವಿಶ್ವನಾಥ ಅಂಕದ, ವಿನಾಯಕ ಭಾಗ್ವತ್, ಪ್ರಶಾಂತ ಹೆಗಡೆ ಭಾಗಿಯಾಗಿದ್ದರು.

ಪರಿಹಾರ ವಿತರಣಾ ಕೆಲಸಕ್ಕೆ ಮುಂಡಗನಮನೆ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಮತ್ತಿಘಟ್ಟಾದ ಗ್ರೀನ್ ರಿವೈನ್ ಮಾಲೀಕ ಪ್ರಮೋದ ವೈದ್ಯ ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.