ADVERTISEMENT

ಭಟ್ಕಳ | ರಾಯರ ಆರಾಧನೆ: ಅದ್ದೂರಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 13:49 IST
Last Updated 21 ಆಗಸ್ಟ್ 2024, 13:49 IST
<div class="paragraphs"><p>ಭಟ್ಕಳ ಪಟ್ಟಣದ ಮಾರುತಿ ನಗರದಲ್ಲಿರುವ ಮನುಪ್ರಭು ಸಂಕಲ್ಪದ ಗುರುರಾಘವೇಂದ್ರ ಮಠದಲ್ಲಿ ರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು</p></div>

ಭಟ್ಕಳ ಪಟ್ಟಣದ ಮಾರುತಿ ನಗರದಲ್ಲಿರುವ ಮನುಪ್ರಭು ಸಂಕಲ್ಪದ ಗುರುರಾಘವೇಂದ್ರ ಮಠದಲ್ಲಿ ರಾಯರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು

   

ಭಟ್ಕಳ: ಪಟ್ಟಣದ ಮಾರುತಿ ನಗರದಲ್ಲಿರುವ ಮನುಪ್ರಭು ಸಂಕಲ್ಪದ ಗುರುರಾಘವೇಂದ್ರ ಮಠದಲ್ಲಿ ರಾಯರ ಆರಾಧನಾ ಮಹೋತ್ಸವ ಸಂಭ್ರಮದಿಂದ ನೆರವೇರಿತು.

ಮಧ್ಯಾರಾಧನೆ ಅಂಗವಾಗಿ ಗುರುವಾರ ಬೆಳಿಗ್ಗೆ ರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ಹಯಗ್ರೀವ ಅರ್ಪಿಸಿ ನಂತರ ಭಕ್ತರಿಂದ ರಾಯರ ಪಾದ ಪೂಜೆ ನಡೆಸಲಾಯಿತು. ಮಧ್ಯಾಹ್ನ ರಾಯರ ಬೃಂದಾವನಕ್ಕೆ ಮಹಾಪೂಜೆ ನಡೆಸಿದ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು. ರಾತ್ರಿ ಬೃಂದಾವನಕ್ಕೆ ಹೂವಿನ ಅಲಂಕಾರದ ಪೂಜೆ ಸಲ್ಲಿಸಿದ ಬಳಿಕ ರಾಯರ ರಥೋತ್ಸವ ನಡೆಯಿತು.

ADVERTISEMENT

 2 ಸಾವಿರಕ್ಕೂ ಹೆಚ್ಚೂ ಭಕ್ತರು ರಾಯರ ಪ್ರಸಾದ ಸ್ವೀಕರಿಸಿದರು. ರಾಯರ ದರ್ಶನಕ್ಕೆ ಬರುವ ಭಕ್ತರಿಗೆ ಅನಾನುಕೂಲವಾಗದಂತೆ ಮಠದ ವತಿಯಿಂದ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.