ಶಿರಸಿ: ತಾಲ್ಲೂಕಿನ ಸಂಪಖಂಡ ಗಜಾನನ ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿನಿ ಅಖಿಲಾ ಭಾಸ್ಕರ ಹೆಗಡೆ (622 ಅಂಕ) ಗಳಿಸಿ ಉತ್ತಮ ಸಾಧನೆ ಮಾಡಿದ್ದಾಳೆ.
ಕೃಷಿಕ ಕುಟುಂಬದ ಮಹಾಲಕ್ಷ್ಮಿ ಮತ್ತು ಭಾಸ್ಕರ ಹೆಗಡೆ ದಂಪತಿ ಪುತ್ರಿ ಅಖಿಲಾ, ಟ್ಯೂಷನ್ ಕ್ಲಾಸ್ಗಳಿಗೆ ಹೋಗದೇ, ಅಂದಿನ ಅಭ್ಯಾಸವನ್ನು ಅಂದೇ ಮಾಡಿಕೊಂಡು, ಉತ್ತಮ ಸಾಧನೆ ಮಾಡಿದ್ದಾಳೆ.
‘ಕೊರೊನಾ ಕಾರಣಕ್ಕೆ ಪರೀಕ್ಷೆ ಮುಂದೂಡಿಕೆಯಾಗಿದ್ದು ನನಗೆ ತುಂಬ ಸಹಾಯವಾಯಿತು. ಪರೀಕ್ಷೆ ನಡೆದೇ ನಡೆಯುತ್ತದೆ ಎಂಬ ವಿಶ್ವಾಸವಿತ್ತು. ಗೊಂದಲಗಳಿದ್ದ ಕೆಲವು ಪಾಠಗಳನ್ನು ಹೆಚ್ಚು ಓದಿಕೊಂಡೆ. ತಿಳಿಯದ ವಿಷಯಗಳನ್ನು ಶಿಕ್ಷಕರ ಬಳಿ, ಅಕ್ಕನ ಬಳಿ ಹೇಳಿಸಿಕೊಳ್ಳುತ್ತಿದ್ದೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಬರುವ ವಿಶ್ವಾಸವಿತ್ತು. ನಿರೀಕ್ಷಿತ ಫಲಿತಾಂಶ ಬಂದಿದೆ. ಮುಂದೆ ವಿಜ್ಞಾನ ವಿಷಯ ಆಯ್ದುಕೊಂಡು, ವೈದ್ಯೆಯಾಗುವ ಕನಸಿದೆ’ ಎಂದು ಅಖಿಲಾ ಪ್ರತಿಕ್ರಿಯಿಸಿದಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.