ADVERTISEMENT

ರಕ್ಷಣಾ ಇಲಾಖೆಯ ಹಣಕಾಸುಕಾರ್ಯದರ್ಶಿ ಸೀಬರ್ಡ್‌ಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2019, 14:15 IST
Last Updated 11 ಅಕ್ಟೋಬರ್ 2019, 14:15 IST
ಕಾರವಾರದ ಸೀಬರ್ಡ್ ನೌಕಾನೆಲೆಗೆ ಭೇಟಿ ನೀಡಿದ ರಕ್ಷಣಾ ಇಲಾಖೆಯ ಹಣಕಾಸು ಕಾರ್ಯದರ್ಶಿ ಗಾರ್ಗಿ ಕೌಲ್, ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು
ಕಾರವಾರದ ಸೀಬರ್ಡ್ ನೌಕಾನೆಲೆಗೆ ಭೇಟಿ ನೀಡಿದ ರಕ್ಷಣಾ ಇಲಾಖೆಯ ಹಣಕಾಸು ಕಾರ್ಯದರ್ಶಿ ಗಾರ್ಗಿ ಕೌಲ್, ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು   

ಕಾರವಾರ:ರಕ್ಷಣಾ ಇಲಾಖೆ ಹಣಕಾಸು ಕಾರ್ಯದರ್ಶಿ ಗಾರ್ಗಿ ಕೌಲ್, ಇಲ್ಲಿನ ಸೀಬರ್ಡ್ ನೌಕಾನೆಲೆಗೆ ಗುರುವಾರ ಮತ್ತು ಶುಕ್ರವಾರ ಭೇಟಿ ನೀಡಿದರು. ಭೇಟಿಯ ಭಾಗವಾಗಿ ಅವರು ನೌಕಾನೆಲೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಹೆಲಿಕಾಪ್ಟರ್‌ನಲ್ಲಿ ಕುಳಿತು ವೀಕ್ಷಿಸಿದರು.

ಕಾಳಿ ನದಿ, ಅಮದಳ್ಳಿ ಗ್ರಾಮ, ಗಂಗಾಗಳಿ ನದಿ ಹಾಗೂ ಕಿರು ಜಲಾಶಯದ ಪ್ರದೇಶವನ್ನು ಅವರು ಪರಿಶೀಲಿಸಿದರು. ಬಳಿಕ ಐಎನ್ಎಸ್ ಕದಂಬ ಹೆಲಿಪ್ಯಾಡ್‌ನಲ್ಲಿ ಅವರನ್ನು ಫ್ಲ್ಯಾಗ್ ಆಫೀಸರ್ ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಬರಮಾಡಿಕೊಂಡರು. ಇದೇ ವೇಳೆ, ನೌಕಾನೆಲೆಯಲ್ಲಿ ನಡೆಯುತ್ತಿರುವಎರಡನೇ ಹಂತದ (2–ಎ) ಅಭಿವೃದ್ಧಿ ಕಾಮಗಾರಿಗಳ ಪ್ರದೇಶಗಳಿಗೂಭೇಟಿ ನೀಡಿ, ಅವುಗಳ ಪ್ರಗತಿ ಪರಿಶೀಲನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT