ADVERTISEMENT

ಶಿರಸಿ: ಉದ್ಯಾನದಲ್ಲಿ ಕಸದ ತೊಟ್ಟಿ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 13:25 IST
Last Updated 11 ಜೂನ್ 2025, 13:25 IST
ಶಿರಸಿಯ ದೇವಿಕೆರೆಯಲ್ಲಿ ನಗರಸಭೆ ವತಿಯಿಂದ ಕಸದ ತೊಟ್ಟಿ ಅಳವಡಿಕೆ ಮಾಡಲಾಯಿತು
ಶಿರಸಿಯ ದೇವಿಕೆರೆಯಲ್ಲಿ ನಗರಸಭೆ ವತಿಯಿಂದ ಕಸದ ತೊಟ್ಟಿ ಅಳವಡಿಕೆ ಮಾಡಲಾಯಿತು   

ಶಿರಸಿ: ನಗರದ‌ ವಿವಿಧ ಉದ್ಯಾನಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದಕ್ಕಾಗಿ ನಗರಸಭೆಯ 15ನೇ ಹಣಕಾಸು ಯೋಜನೆ ಅಡಿಯಲ್ಲಿ 15 ಕಸದ ತೊಟ್ಟಿಗಳನ್ನು ಖರೀದಿಸಿದ್ದು, ಅದರಲ್ಲಿ 8 ಕಸದ ತೊಟ್ಟಿಗಳನ್ನು ನಗರದ ಹೃದಯ ಭಾಗದಲ್ಲಿರುವ ದೇವಿಕೆರೆ ಉದ್ಯಾನದಲ್ಲಿ ಅಳವಡಿಸಲಾಗಿದೆ.

ಬುಧವಾರ ದೇವಿಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಸದ ತೊಟ್ಟಿ ಅಳವಡಿಕೆಯನ್ನು ಸಾಂಕೇತಿಕವಾಗಿ ಉದ್ಘಾಟನೆ ಮಾಡಲಾಯಿತು. ಉಳಿದ ಕಸದ ತೊಟ್ಟಿಗಳನ್ನು ಅವಶ್ಯ ಇರುವ ಉದ್ಯಾನದಲ್ಲಿ ಅಳವಡಿಸಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದು ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಹೇಳಿದರು.

ನಗರಸಭೆ ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅದ್ಯಕ್ಷ ರಾಘು ಶೆಟ್ಟಿ, ಸದಸ್ಯರಾದ ಕುಮಾರ ಬೋರ್ಕರ್, ಆನಂದ ಸಾಲೇರ್, ಗಣಪತಿ ನಾಯ್ಕ, ಪ್ರಭಾರಿ ಪೌರಾಯುಕ್ತ ಶಿವರಾಜ, ಕಂದಾಯ ಅಧಿಕಾರಿ ಆರ್.ಎಂ. ವೆರ್ಣೇಕರ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.