ADVERTISEMENT

ಶಿರಸಿ: ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 13:12 IST
Last Updated 26 ಏಪ್ರಿಲ್ 2024, 13:12 IST

ಶಿರಸಿ: ಶಿರಸಿ, ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ತಕ್ಷಣಕ್ಕೆ ಜಾರಿಗೆ ಬರುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಪ್ರಚಾರ ಸಮಿತಿ ಅಧ್ಯಕ್ಷ ವೆಂಕಟೇಶ ಹೆಗಡೆ ಹೊಸಬಾಳೆ ಆದೇಶ ನೀಡಿದ್ದಾರೆ.

ಶಿರಸಿ ತಾಲ್ಲೂಕು ಪ್ರಚಾರ ಸಮಿತಿ ಉಪಾಧ್ಯಕ್ಷರಾಗಿ ರಮೇಶ ದುಬಾಶಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜು ನರಸಿಂಹ ಉಗ್ರಾಣಕರ, ನಾರಾಯಣ ವಿ. ವೈದ್ಯ, ಕಾರ್ಯದರ್ಶಿಗಳನ್ನಾಗಿ ಪ್ರದೀಪ ಸಂಜೀವ ಶೆಟ್ಟಿ, ಅಬ್ದುಲ್ ಖಾದರ ಆನವಟ್ಟಿ, ನಂದಕುಮಾರ ಜೋಗಳೇಕರ, ಪ್ರಕಾಶ ಸುಬ್ರಾಯ ಜೈವಂತ, ಗಣೇಶ ದಾವಣಗೆರೆ ನೇಮಿಸಲಾಗಿದೆ. ಅಲ್ಲದೆ, 47 ಮಂದಿ ಸ್ಥಳೀಯ ಮುಖಂಡರನ್ನು ಗೌರವ ಸದಸ್ಯರನ್ನು ನೇಮಕ ಮಾಡಲಾಗಿದೆ.

ಸಿದ್ದಾಪುರ ತಾಲ್ಲೂಕು ಪ್ರಚಾರ ಸಮಿತಿ ಉಪಾಧ್ಯಕ್ಷರಾಗಿ ಮಾರುತಿ ಕೀಂದ್ರಿ, ಪ್ರಧಾನ ಕಾರ್ಯದರ್ಶಿಯನ್ನಾಗಿ ಲಕ್ಷ್ಮೀನಾರಾಯಣ ಹೆಗಡೆ, ರಾಘವೆಂದ್ರ ನಾಯ್ಕ ಕಂವಚೂರ, ಕಾರ್ಯದರ್ಶಿಯಾಗಿ ಸುಶೀಲಾ ಗೌಡ‌ರ್, ಚಂದ್ರು ಕಾನಡೆ, ನಾಗರಾಜ ನಾಯ್ಕ ಕುಂಬ್ಳೆ ಅವರನ್ನು ನೇಮಕ ಮಾಡಲಾಗಿದೆ. ಸ್ಥಳೀಯ 53 ನಾಯಕರನ್ನು ಗೌರವ ಸದಸ್ಯರನ್ನಾಗಿ ನೇಮಿಸಿ ಆದೇಶ ಮಾಡಲಾಗಿದೆ. ಆಯಾ ತಾಲ್ಲೂಕುಗಳಲ್ಲಿ ಪ್ರಚಾರ ಸಮಿತಿಯವರು ಆಯಾ ಘಟಕಗಳೊಂದಿಗೆ ಸೇರಿ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿಸಿ ಕೊಂಡಿದ್ದಾರೆ ಎಂದು ವೆಂಕಟೇಶ ಹೆಗಡೆ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.