ಶಿರಸಿ: ಮಂಗಳವಾರ ಸಂಜೆ ಬಂದೂಕು ಲೋಡ್ ಮಾಡುವ ವೇಳೆ ಆಕಸ್ಮಿಕ ಗುಂಡು ಹಾರಿ ತಾಲೂಕಿನ ವಾನಳ್ಳಿ ಕೆರೆಗದ್ದೆಯಲ್ಲಿ ಕಾಲೇಜು ವಿದ್ಯಾರ್ಥಿ ಮೃತಪಟ್ಟಿದ್ದಾರೆ.
ಕಾರ್ತೀಕ ಹೆಗಡೆ (17) ಮೃತ ವಿದ್ಯಾರ್ಥಿ. ಕೃಷಿ ಬೆಳೆಯ ರಕ್ಷಣೆಗಾಗಿ ಮನೆಯಲ್ಲಿ ಪರವಾನಗಿ ಹೊಂದಿರುವ ಬಂದೂಕು ಇತ್ತು.
ಮನೆ ಸಮೀಪ ಬಂದಿದ್ದ ಮಂಗನನ್ನು ಹೆದರಿಸಲು ಈ ಬಂದೂಕು ಲೋಡ್ ಮಾಡುವ ವೇಳೆ ಈ ಘಟನೆ ನಡೆದಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.