ADVERTISEMENT

ಮನೆಯಿಂದ ಕಾಣೆಯಾದ ಮೂವರು ಹೊಳೆಯಲ್ಲಿ‌ ಶವವಾಗಿ‌ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2020, 14:53 IST
Last Updated 22 ನವೆಂಬರ್ 2020, 14:53 IST
ಮೃತ ಶರೀರ (ಸಾಂದರ್ಭಿಕ ಚಿತ್ರ)
ಮೃತ ಶರೀರ (ಸಾಂದರ್ಭಿಕ ಚಿತ್ರ)    

ಯಲ್ಲಾಪುರ: ತಾಲ್ಲೂಕಿನ ಹಿತ್ಲಳ್ಳಿ ಗ್ರಾಮ‌ಪಂಚಾಯಿತಿ ವ್ಯಾಪ್ತಿಯ ಕಲಗೋಡ್ಲುವಿನಲ್ಲಿ ಶುಕ್ರವಾರ ಮನೆಯಿಂದ ಕಾಣೆಯಾಗಿದ್ದ ತಾಯಿ, ಮಗಳು ಹಾಗೂ ಮೊಮ್ಮಗನ ಮೃತದೇಹಗಳು ಸಮೀಪದ ಗಣೇಶ್ ಪಾಲ್ ಹೊಳೆಯಲ್ಲಿ‌ ಭಾನುವಾರ ಪತ್ತೆಯಾಗಿವೆ.

ರಾಜೇಶ್ವರಿ ನಾರಾಯಣ ಹೆಗಡೆ (52), ವಾಣಿ ಪ್ರಕಾಶ್.ವೈ (28) ಹಾಗೂ ವಾಣಿ ಅವರ, ಇನ್ನೂ ಹೆಸರಿಡದ 11 ತಿಂಗಳ ಗಂಡು ಮಗು ಮೃತರು.

ಈ ಮೂವರೂ ನ.20ರಂದು ಮನೆಯಿಂದ ಕಾಣೆಯಾಗಿದ್ದರು. ಹಲವೆಡೆ ಹುಡುಕಾಡಿದ ಮನೆಯವರು ಭಾನುವಾರ, ದೂರು ನೀಡಲು ಯಲ್ಲಾಪುರ‌ ಪೊಲೀಸ್ ಠಾಣೆಗೆ ಬಂದಿದ್ದರು. ಅದೇ ಸಮಯಕ್ಕೆ ಗಣೇಶ್‌ ಪಾಲ್‌ ಹೊಳೆಯಲ್ಲಿ ಮೃತದೇಹ‌ಗಳು ಸಿಕ್ಕಿರುವ ಮಾಹಿತಿ ಲಭಿಸಿತು.

ADVERTISEMENT

ವಾಣಿಯ ಪತಿಯ ಮನೆಯು ಶಿವಮೊಗ್ಗದಲ್ಲಿದೆ. ಅವರ ಮಗುವಿಗೆ ನಾಮಕರಣ ಕಾರ್ಯಕ್ರಮವನ್ನು ಭಾನುವಾರ (ನ.22) ನಿಗದಿ ಮಾಡಲಾಗಿತ್ತು ಎಂದು ಗೊತ್ತಾಗಿದೆ. ಆದರೆ, ಹೆಸರಿಡುವ ಮೊದಲೇ ಮಗುವಿನ ಉಸಿರು ನಿಂತು‌ಹೋಗಿದೆ. ಪೊಲೀಸರು ತನಿಖೆ‌ ನಡೆಸಿದ್ದು, ಹೆಚ್ಚಿನ‌ ಮಾಹಿತಿ ತಿಳಿದು‌ಬರಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.