ADVERTISEMENT

‘ಸಿಆರ್‌ಝೆಡ್ ವಿನಾಯಿತಿ: ಮತ್ತಷ್ಟು ಅವಕಾಶ’

ಕಾಟೇಜ್‍, ಬೋಟ್ ಹೌಸ್‍, ಮೈಕ್ರೋಲೈಟ್, ಹ್ಯಾಂಡ್‍ಗ್ಲೈಡಿಂಗ್‍ಗೂ ಚಿಂತನೆ

​ಪ್ರಜಾವಾಣಿ ವಾರ್ತೆ
Published 25 ಮೇ 2019, 14:55 IST
Last Updated 25 ಮೇ 2019, 14:55 IST
ಕಾರವಾರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿದರು
ಕಾರವಾರದಲ್ಲಿ ಶನಿವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಮಾತನಾಡಿದರು   

ಕಾರವಾರ:ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝೆಡ್) ಹೊಸ ನಿಯಮಾವಳಿಗಳಲ್ಲಿ ಕರ್ನಾಟಕಕ್ಕೂ ಗೋವಾ ಮಾದರಿಯಲ್ಲಿ ಸ್ವಲ್ಪಮಟ್ಟಿನ ವಿನಾಯಿತಿಗಳು ಸಿಗಲಿವೆ. ಇದರಿಂದಜಿಲ್ಲೆಯ ಕಡಲತೀರಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಆಯಾಮ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿಶನಿವಾರ ನಡೆದ ಜಿಲ್ಲಾ ಪ್ರವಾಸಿ ಸ್ಥಳಗಳ ಅಭಿವೃದ್ಧಿ ಹಾಗೂ ಸಂರಕ್ಷಣಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಕಡಲತೀರದಲ್ಲಿ ಪ್ರವಾಸೋದ್ಯಮಕ್ಕೆ ಅಡ್ಡಿಯಾಗಿದ್ದ ಸಿಆರ್‌ಝೆಡ್ತನ್ನ ಹೊಸ ನಿಯಮಾವಳಿಗಳಲ್ಲಿ ಸ್ವಲ್ಪಮಟ್ಟಿನ ವಿನಾಯಿತು ನೀಡಿದೆ. ಹಾಗಾಗಿ ಗೋವಾ ಮಾದರಿಯಲ್ಲಿ ಕಾಟೇಜ್‍ಗಳನ್ನು ನಿರ್ಮಿಸಲು ಹಾಗೂ ಇನ್ನಿತರ ಪ್ರವಾಸೋದ್ಯಮ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಲಿದೆ’ ಎಂದರು.

ADVERTISEMENT

ಈಗಾಗಲೇ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಅವುಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕಿದೆ. ಜಿಲ್ಲೆಯ ವಿವಿಧ ಉಪ ವಿಭಾಗಗಳಿಂದ ಸಹಾಯಕ ಆಯುಕ್ತರು ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಹೊಸ ಪ್ರಸ್ತಾವಗಳನ್ನು ನೀಡುವಂತೆ ಅವರು ಸೂಚಿಸಿದರು.

ಮುರ್ಡೇಶ್ವರದ ನೇತ್ರಾಣಿಯಲ್ಲಿ ಸಮೀಪದ ಮತ್ತೊಂದು ಭಾಗದಲ್ಲೂ ಸ್ಕೂಬಾ ಡೈವಿಂಗ್ ನಡೆಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸಂಬಂಧಿಸಿದ ಸಂಸ್ಥೆಗಳಿಗೆ ಸೂಚಿಸಿದರು. ಅಲ್ಲದೇಕಾರವಾರದ ಲೈಟ್‍ಹೌಸ್‍ನಲ್ಲಿ ಸ್ಕೂಬಾ ಡೈವಿಂಗ್ ಅನುಮತಿ ಪಡೆದ ಸಂಸ್ಥೆ ಇಲ್ಲಿಯೂ ನಿರಂತರ ಚಟುವಟಿಕೆ ನಡೆಸಬೇಕು ಎಂದು ಸೂಚಿಸಿದರು.

ನೇತ್ರಾಣಿ ಗುಡ್ಡದಲ್ಲಿ ಮುನ್ಸೂಚನೆ ಇಲ್ಲದೆ ನೌಕಾಪಡೆಯಿಂದ ತರಬೇತಿ ಚಟುವಟಿಕೆಗಳು ನಡೆಯುತ್ತಿವೆ. ಇದರಿಂದಪ್ರವಾಸಿಗರಿಗೆ ಆತಂಕ ಉಂಟಾಗುತ್ತಿದೆ ಎಂಬ ವಿಷಯ ಪ್ರಸ್ತಾಪವಾಯಿತು. ಈ ಬಗ್ಗೆ ನೌಕಾಪಡೆಯ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಅಘನಾಶಿನಿ ನದಿಯಲ್ಲಿ ಬೋಟ್ ಹೌಸ್‍ಸಂಚಾರಕ್ಕೆ ಕಾರ್ಯಯೋಜನೆರೂಪಿಸಬೇಕು. ಈ ಚಟುವಟಿಕೆಗೆ ಆಸಕ್ತ ಸಂಸ್ಥೆಗಳಿಂದ ಟೆಂಡರ್ ಆಹ್ವಾನಿಸುವಂತೆ ಸೂಚಿಸಿದರು.

ಪ್ಯಾರಾ ಮೋಟಾರ್ ಗ್ಲೈಡಿಂಗ್ ಮಾದರಿಯಲ್ಲಿಯೇ ಮೈಕ್ರೋಲೈಟ್ಸ್, ಹ್ಯಾಂಡ್‍ ಗ್ಲೈಡಿಂಗ್‍ಗೆ ವಿದೇಶಿಪ್ರವಾಸಿಗರು ಹಾಗೂ ಸಾಹಸಿಗರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.ಕಾರವಾರದಲ್ಲಿ ಈ ಚಟುವಟಿಕೆಗೆ ಉತ್ತಮ ಅವಕಾಶವಿದೆ. ಈ ಕುರಿತು ಪ್ರಸ್ತುತ ಕಾರವಾರದಲ್ಲಿ ಪ್ಯಾರಾ ಮೋಟಾರ್ ಗ್ಲೈಡಿಂಗ್ ಮಾಡುತ್ತಿರುವ ಡಾ.ವೈದ್ಯ ಅವರಿಂದಲೇ ಪ್ರಸ್ತಾವ ಪಡೆಯುವಂತೆ ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮೊಹಮ್ಮದ್ ರೋಶನ್,ಹೆಚ್ಚುವರಿಜಿಲ್ಲಾಧಿಕಾರಿ ನಾಗರಾಜ್ ಸಿಂಗ್ರೇರ್,ಉಪ ವಿಭಾಗಾಧಿಕಾರಿಗಳಾದಸಾಜಿದ್ ಮುಲ್ಲಾ, ಪ್ರೀತಿ ಗೆಹ್ಲೋಟ್, ಸಿಆರ್‌ಝೆಡ್ ಅಧಿಕಾರಿ ಪ್ರಸನ್ನ ಪಟಗಾರ್, ಹೆಚ್ಚುವರಿ ಜಿಲ್ಲಾ ಪೊಲೀಸ್ವರಿಷ್ಠಾಧಿಕಾರಿಗೋಪಾಲ ಬ್ಯಾಕೋಡ್ ಹಾಗೂ ವಿವಿಧ ಅಧಿಕಾರಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.