‘ಮಂಗನ ಕಾಯಿಲೆ’
ಹೊನ್ನಾವರ (ಉತ್ತರ ಕನ್ನಡ ಜಿಲ್ಲೆ): ಮಂಗನಕಾಯಿಲೆಯಿಂದ (ಕೆಎಫ್ಡಿ) ಬಳಲುತ್ತಿದ್ದ ತಾಲ್ಲೂಕಿನ ಗ್ರಾಮವೊಂದರ ನಿವಾಸಿ ತಿಮ್ಮಣ್ಣ ಶಂಕರ ಹೆಗಡೆ (63) ಗುರುವಾರ ಮೃತಪಟ್ಟರು.
ತಿಮ್ಮಣ್ಣ ಹೆಗಡೆ ಅವರಿಗೆ ಮಂಗನಕಾಯಿಲೆ ಇರುವುದು ಏಪ್ರಿಲ್ 5ರಂದು ರಕ್ತ ಪರೀಕ್ಷೆ ಬಳಿಕ ದೃಢಪಟ್ಟಿತ್ತು. ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ತಾಲ್ಲೂಕಿನಲ್ಲಿ ಈ ವರ್ಷ ನಾಲ್ವರಲ್ಲಿ ಮಂಗನಕಾಯಿಲೆ ದೃಢಪಟ್ಟಿದ್ದು, ಉಳಿದ ಮೂವರು ಗುಣಮುಖರಾಗಿದ್ದಾರೆ’ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.