ADVERTISEMENT

ಶಿರಸಿ: ಬಾವಿಗೆ ಬಿದ್ದಿದ್ದ ಕಾಡುಕೋಣ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 5:15 IST
Last Updated 23 ನವೆಂಬರ್ 2025, 5:15 IST
ಶಿರಸಿಯ ಗ್ರಾಮೀಣ ಪ್ರದೇಶದ ತೋಟದ ಬಾವಿಗೆ ಬಿದ್ದಿದ್ದ ಕಾಡುಕೋಣವನ್ನು ರಕ್ಷಿಸಿರುವುದು 
ಶಿರಸಿಯ ಗ್ರಾಮೀಣ ಪ್ರದೇಶದ ತೋಟದ ಬಾವಿಗೆ ಬಿದ್ದಿದ್ದ ಕಾಡುಕೋಣವನ್ನು ರಕ್ಷಿಸಿರುವುದು    

ಶಿರಸಿ: ತಾಲ್ಲೂಕಿನ ತಟಗುಣಿ ಗ್ರಾಮದ ಗೋಳಗೂಡು ಮಜರೆಯ ತೋಟದ ಬಾವಿಯೊಂದರಲ್ಲಿ ಬಿದ್ದಿದ್ದ ಕಾಡುಕೋಣವನ್ನು ಅರಣ್ಯ ಇಲಾಖೆಯವರು ಶನಿವಾರ ರಕ್ಷಿಸಿದ್ದಾರೆ.

ಸ್ಥಳೀಯ ಗಜಾನನ ಹೆಗಡೆ ಅವರಿಗೆ ಸೇರಿದ ತೋಟದ ಬಾವಿಯಲ್ಲಿ ಬಿದ್ದಿದ್ದ ಕಾಡುಕೋಣವನ್ನು ಅರಣ್ಯ ಇಲಾಖೆ ಸಿಬ್ಬಂದಿ, ಸಾರ್ವಜನಿಕರ ಸಹಕಾರದೊಂದಿಗೆ ಮೇಲಕ್ಕೆ ಎತ್ತಿದರು.

‘ಕಾಡುಕೋಣದ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಗಾಯಗಳು ಮೇಲ್ನೊಟಕ್ಕೆ ಕಂಡುಬಂದಿಲ್ಲ. ಅದನ್ನು ಸುರಕ್ಷಿತವಾಗಿ ಕಾಡಿಗೆ ಹಿಮ್ಮೆಟ್ಟಿಸಲಾಗಿದೆ’ ಎಂದು ಆರ್.ಎಫ್.ಒ ಗಿರೀಶ ಎಲ್.ನಾಯ್ಕ ಮಾಹಿತಿ ನೀಡಿದರು.

ADVERTISEMENT

ಶಿರಸಿ ಡಿಸಿಎಫ್ ಸಂದೀಪ ಸೂರ್ಯವಂಶಿ, ಎಸಿಎಫ್ ಎಸ್.ಎಸ್.ನಿಂಗಾಣಿ ಮಾರ್ಗದರ್ಶನದಲ್ಲಿ ಆರ್.ಎಫ್.ಒ ಗಿರೀಶ ಎಲ್.ನಾಯ್ಕ ನೇತೃತ್ವದಲ್ಲಿ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.