ADVERTISEMENT

ಮನೆಗೆ ಮರಳಿದ ಯಲ್ಲಾಪುರ ಶಾಸಕ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 12:45 IST
Last Updated 1 ಡಿಸೆಂಬರ್ 2019, 12:45 IST
ಶಾಸಕ ಶಿವರಾಮ ಹೆಬ್ಬಾರ್
ಶಾಸಕ ಶಿವರಾಮ ಹೆಬ್ಬಾರ್   

ಯಲ್ಲಾಪುರ (ಉತ್ತರ ಕನ್ನಡ) : ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ ಯಲ್ಲಾಪುರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಶಿವರಾಮ ಹೆಬ್ಬಾರ್ ಬುಧವಾರ ರಾತ್ರಿ ಊರಿನ ತಮ್ಮ ಮನೆಗೆ ಬಂದಿದ್ದಾರೆ.

ರಾಜಿನಾಮೆ ನೀಡಿದ ನಂತರ ರೆಬೆಲ್‌ ಶಾಸಕರೊಂದಿಗೆ ಕಳೆದ 18 ದಿನಗಳಿಂದ ಮುಂಬೈನಲ್ಲಿ ರೆಸಾರ್ಟ್ ವಾಸ್ತವ್ಯದಲ್ಲಿದ್ದ ಹೆಬ್ಬಾರ್, ಖಾಸಗಿ ಕೆಲಸದ ನಿಮಿತ್ತ ಬಂದಿರುವುದಾಗಿ ಪ್ರತಿಕ್ರಿಯಿಸಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಖಾಸಗಿ ಕೆಲಸದ ನಿಮಿತ್ತ ಊರಿಗೆ ಬಂದಿದ್ದೇನೆ. ಗುರುವಾರ ಮತ್ತೆ ವಾಪಸ್ ಮುಂಬೈಗೆ ತೆರಳಲಿದ್ದೇನೆ. ಇನ್ನೂ ಮೂರ್ನಾಲ್ಕು ದಿನಗಳ ನಂತರ ಮತ್ತೆ ಯಲ್ಲಾಪುರಕ್ಕೆ ಬರುತ್ತೇನೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.