ADVERTISEMENT

ಮನಸೂರೆಗೊಳಿಸಿದ ತಾಳಮದ್ದಳೆ, ಭರತನಾಟ್ಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2021, 8:16 IST
Last Updated 2 ಮಾರ್ಚ್ 2021, 8:16 IST
ಹೊಸಪೇಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿನಿ ಗೀತಾ,  ಭರತನಾಟ್ಯ ಪ್ರಸ್ತುತಪಡಿಸಿದರು
ಹೊಸಪೇಟೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಲೇಜು ವಿದ್ಯಾರ್ಥಿನಿ ಗೀತಾ,  ಭರತನಾಟ್ಯ ಪ್ರಸ್ತುತಪಡಿಸಿದರು   

ವಿಜಯನಗರ (ಹೊಸಪೇಟೆ): ಕರ್ನಾಟಕ ಕಲಾಭಿಮಾನಿ ಸಂಘದಿಂದ ಸೋಮವಾರ ನಗರದ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ತಾಳಮದ್ದಳೆ, ಭರತನಾಟ್ಯ ಕಾರ್ಯಕ್ರಮ ಮನಸೂರೆಗೊಳಿಸಿತು.

ಗಜಾನನ ಭಟ್ ತುಳಗೇರಿಮಠ, ಪ್ರಮೋದ್ ಹೆಗಡೆ ಯಲ್ಲಾಪುರ, ನರಸಿಂಹ ಹೆಗಡೆ ಮೂರೂರು, ಶಿವಾನಂದ ಹೆಗಡೆ ಕೆರೆಮನೆ, ನಾರಾಯಣ ಯಾಜಿ ಸಾಲೆಬೈಲು, ಅನಂತ ವೈದ್ಯ ಯಲ್ಲಾಪುರ, ಸೂರಾಲು ದೇವಿಪ್ರಸಾದ ತಂತ್ರಿ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಸಿಕೊಟ್ಟರು. ಕಾಲೇಜು ವಿದ್ಯಾರ್ಥಿನಿ ಗೀತಾ ಭರತನಾಟ್ಯ ಪ್ರಸ್ತುತಪಡಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಸಾಲಿ ಸಿದ್ದಯ್ಯ ಸ್ವಾಮಿ, ‘ಕಲೆ, ಸಂಸ್ಕೃತಿ ಜೀವನದ ಅವಿಭಾಜ್ಯ ಅಂಗ. ಅದನ್ನು ಉಳಿಸಿ, ಬೆಳೆಸಬೇಕು’ ಎಂದರು.

ADVERTISEMENT

ಕಾಲೇಜಿನ ಪ್ರಾಂಶುಪಾಲ ಬಿ.ಜಿ ಕನಕೇಶಮೂರ್ತಿ, ಸಾಂಸ್ಕೃತಿಕ ವಿಭಾಗದ ಸಂಚಾಲಕ ನಾಗಣ್ಣ ಕಿಲಾರಿ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಸಾಲಿ ಬಸವರಾಜ್, ಸಂಘದ ಅಧ್ಯಕ್ಷ ಮೋಹನ್ ಕುಂಟಾರ್, ವಿಜಯ ನಗರ ಕಾಲೇಜಿನ ಪ್ರಾಂಶುಪಾಲ ವಿ.ಎಸ್‌. ಪ್ರಭಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.