ADVERTISEMENT

ನಾಟಿವೈದ್ಯ ಆನಂದಯ್ಯ ಔಷಧ ವಿತರಣೆಗೆ ತಡೆ: ಮುಖ್ಯಮಂತ್ರಿಗೆ ಸ್ವಾಮೀಜಿ ಪತ್ರ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 12:16 IST
Last Updated 30 ಜೂನ್ 2021, 12:16 IST

ಹೊಸಪೇಟೆ (ವಿಜಯನಗರ): ಆಂಧ್ರ ಪ್ರದೇಶದ ಕೃಷ್ಣಪಟ್ಟಣಂನ ನಾಟಿವೈದ್ಯ ಆನಂದಯ್ಯ ಅವರು ಗಿಡಮೂಲಿಕೆಗಳಿಂದ ತಯಾರಿಸಿದ ಕೋವಿಡ್‌ ಔಷಧ ವಿತರಣೆಗೆ ಅನುಮತಿ ನೀಡಬೇಕೆಂದು ಕೋರಿ ಹನುಮದ್‌ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸಂಸ್ಥಾಪಕ ಗೋವಿಂದಾನಂದ ಸರಸ್ವತಿ ಸ್ವಾಮೀಜಿ, ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.

ಸ್ವಾಮೀಜಿಯವರು ಜಿಲ್ಲೆಯ ವಿವಿಧೆಡೆ ಸಾರ್ವಜನಿಕರಿಗೆ ಉಚಿತವಾಗಿ ಔಷಧ ವಿತರಿಸುತ್ತಿದ್ದಾರೆ. ಇತ್ತೀಚೆಗೆ ಕಮಲಾಪುರದಲ್ಲೂ ವಿತರಿಸಿದ್ದರು. ಆದರೆ, ವಿಷಯ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಡಳಿತ ಅದಕ್ಕೆ ತಡೆ ಒಡ್ಡಿತ್ತು. ಸರ್ಕಾರದಿಂದ ಅನುಮತಿ ಪಡೆಯದ ಕಾರಣ ಔಷಧ ವಿತರಣೆಗೆ ಅವಕಾಶ ಕಲ್ಪಿಸುತ್ತಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಮಧ್ಯೆ ಸ್ವಾಮೀಜಿ ಸಿ.ಎಂ.ಗೆ ಪತ್ರ ಬರೆದಿದ್ದಾರೆ.

ಗಿಡಮೂಲಿಕೆಗಳಿಂದ ತಯಾರಿಸಿದ ಈ ಔಷಧಕ್ಕೆ ಆಂಧ್ರ ಪ್ರದೇಶದ ಆಯುಷ್‌ ಇಲಾಖೆ ಮಾನ್ಯ ಮಾಡಿದೆ. ಈಗಾಗಲೇ ಹಲವು ಕಡೆಗಳಲ್ಲಿ ವಿತರಿಸಲಾಗಿದೆ. ಈಗ ಜಿಲ್ಲಾಡಳಿತ ವಿನಾಕಾರಣ ತಡೆಯೊಡ್ಡಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.