ADVERTISEMENT

ಹಂಪಿಯಲ್ಲಿ ಸಿಕ್ಕಿಕೊಂಡಿದ್ದ ಜಯಂತಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 12:23 IST
Last Updated 26 ಜುಲೈ 2021, 12:23 IST
ಒಂದು ತಿಂಗಳ ವಾಸ್ತವ್ಯದ ನಂತರ ಬೆಂಗಳೂರಿಗೆ ಪಯಣ ಬೆಳೆಸುವಾಗ ನಟಿ ಜಯಂತಿಗೆ ಅವರಿಗೆ ಹೊಸಪೇಟೆ ತಾಲ್ಲೂಕಿನ ಕಮಲಾಪುರದ ಹೋಟೆಲ್‌ ಮಯೂರ ಭುವನೇಶ್ವರಿ ಸಿಬ್ಬಂದಿ ಬೀಳ್ಕೊಟ್ಟ ಸಂದರ್ಭ
ಒಂದು ತಿಂಗಳ ವಾಸ್ತವ್ಯದ ನಂತರ ಬೆಂಗಳೂರಿಗೆ ಪಯಣ ಬೆಳೆಸುವಾಗ ನಟಿ ಜಯಂತಿಗೆ ಅವರಿಗೆ ಹೊಸಪೇಟೆ ತಾಲ್ಲೂಕಿನ ಕಮಲಾಪುರದ ಹೋಟೆಲ್‌ ಮಯೂರ ಭುವನೇಶ್ವರಿ ಸಿಬ್ಬಂದಿ ಬೀಳ್ಕೊಟ್ಟ ಸಂದರ್ಭ   

ಹೊಸಪೇಟೆ (ವಿಜಯನಗರ): ಸೋಮವಾರ ನಿಧನರಾದ ನಟಿ ಜಯಂತಿ ಹೋದ ವರ್ಷ ಹಂಪಿ ವೀಕ್ಷಣೆಗೆ ಬಂದು, ಕೋವಿಡ್‌ ಲಾಕ್‌ಡೌನ್‌ನಲ್ಲೇ ಸಿಲುಕಿಕೊಂಡಿದ್ದರು.

2020ರ ಏಪ್ರಿಲ್‌ನಲ್ಲಿ ಹಂಪಿ ಬೈ ನೈಟ್‌ ವೀಕ್ಷಣೆಗೆ ನಟಿ ಜಯಂತಿ ಅವರು ಮಗ ಕೃಷ್ಣಕುಮಾರ ಜತೆಗೆ ಬಂದಿದ್ದರು. ಏಕಾಏಕಿ ಕೋವಿಡ್‌ ಲಾಕ್‌ಡೌನ್‌ ಘೋಷಿಸಿದ್ದರಿಂದ ಅವರು ಒಂದು ತಿಂಗಳಿಗೂ ಹೆಚ್ಚು ಸಮಯ ಕಮಲಾಪುರದ ಪ್ರವಾಸೋದ್ಯಮ ಇಲಾಖೆಗೆ ಸೇರಿದ ಹೋಟೆಲ್‌ ಮಯೂರ ಭುವನೇಶ್ವರಿಯಲ್ಲಿ ತಂಗಿದ್ದರು.

ಈ ಕುರಿತು ‘ಪ್ರಜಾವಾಣಿ’ ಬೆಳಕು ಚೆಲ್ಲಿತ್ತು. ಬಳಿಕ ಸರ್ಕಾರ ಅವರಿಗೆ ಬೆಂಗಳೂರಿಗೆ ತೆರಳಲು ಅನುವು ಮಾಡಿಕೊಟ್ಟಿತ್ತು.

ADVERTISEMENT

‘ನಟಿ ಜಯಂತಿ ಅವರು ಒಂದು ತಿಂಗಳು ನಮ್ಮ ಹೋಟೆಲ್‌ನಲ್ಲೇ ಇದ್ದರು. ದೊಡ್ಡ ನಟಿಯಾಗಿದ್ದರೂ ಯಾವುದೇ ಹಮ್ಮು ಬಿಮ್ಮು ಇರಲಿಲ್ಲ. ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. ಅವರು ಕಾಲವಾದ ವಿಷಯ ತಿಳಿದು ಮನಸ್ಸಿಗೆ ನೋವಾಗಿದೆ’ ಎಂದು ಹೋಟೆಲ್‌ ವ್ಯವಸ್ಥಾಪಕ ಅಭಯ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.