ADVERTISEMENT

ಹಂಪಿ ಮೃಗಾಲಯಕ್ಕೆ ಪಿಲಿಕುಳದಿಂದ ಗಂಡು ನೀರುಕುದುರೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 6:59 IST
Last Updated 17 ಜುಲೈ 2025, 6:59 IST
ನೀರುಕುದುರೆ
ನೀರುಕುದುರೆ   

ಹೊಸಪೇಟೆ (ವಿಜಯನಗರ): ಕಲ್ಯಾಣ ಕರ್ನಾಟಕ ಭಾಗದ ಏಕೈಕ ಸಫಾರಿ ಹೊಂದಿರುವ ಮೃಗಾಲಯ ಎಂಬ ಖ್ಯಾತಿಯ ಕಮಲಾಪುರದ ಶ್ರೀ ಅಟಲ್ ಬಿಹಾರಿ ವಾಜಪೇಯಿ ಜೂವಾಲಾಜಿಕಲ್ ಪಾರ್ಕ್‌ಗೆ ಮಂಗಳೂರು ಪಿಲಿಕುಳ ಜೈವಿಕ ಉದ್ಯಾನವನದಿಂದ ಚಿಂಟು ಹೆಸರಿನ ಗಂಡು ನೀರುಕುದುರೆಯನ್ನು ಬುಧವಾರ ತರಲಾಗಿದೆ.

‘ಮೃಗಾಲಯಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳನ್ನು ತರಲು ಕೇಂದ್ರ ಮೃಗಾಲಯ ಪ್ರಾಧಿಕಾರ ಅನುಮತಿ ನೀಡಿದ ಮೇರೆಗೆ 6 ವರ್ಷದ ನೀರುಕುದುರೆ ಹೊಸ ಅತಿಥಿಯಾಗಿ ಆಗಮಿಸಿದೆ’ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ ನಾಯ್ಕ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT