ADVERTISEMENT

ವಿಜಯನಗರ: ಸಿಎಂ ಬೊಮ್ಮಾಯಿಗೆ ಸಿದ್ಧವಾಗುತ್ತಿದೆ ಮಂಡಕ್ಕಿ ವಗ್ಗರಣೆ, ಉಪ್ಪಿಟ್ಟು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 3:51 IST
Last Updated 12 ಅಕ್ಟೋಬರ್ 2022, 3:51 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಾಗಿ ಮಹಿಳೆಯರು ಉಪಾಹಾರ ತಯಾರಿಸುತ್ತಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗಾಗಿ ಮಹಿಳೆಯರು ಉಪಾಹಾರ ತಯಾರಿಸುತ್ತಿದ್ದಾರೆ.   

ಹೊಸಪೇಟೆ (ವಿಜಯನಗರ): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಾಲ್ಲೂಕಿನ ಕಮಲಾಪುರದ ಡಾ.ಬಿ.ಆರ್. ಅಂಬೇಡ್ಕರ್ ಕಾಲೊನಿಯ ಹಿರಾಳ್ ಕೊಲ್ಲಾರಪ್ಪ ಮನೆಯಲ್ಲಿ ಉಪಾಹಾರ ಸಿದ್ಧವಾಗುತ್ತಿದೆ.

ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಬಂದಿರುವ ಸಿ.ಎಂ. ಪರಿಶಿಷ್ಟರ ಕಾಲೊನಿ ಭೇಟಿ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಅದೇ ಕಾಲೊನಿಯ ಕೊಲ್ಲಾರಪ್ಪ ಮನೆಯಲ್ಲಿ ಉಪಾಹಾರ ಸೇವಿಸುವರು.

ಸಿ.ಎಂ. ಅವರಿಗೆ ಕೊಲ್ಲಾರಪ್ಪ ಮಕ್ಕಳಾದ ರೇಣುಕಾ, ಹುಲಿಗೆಮ್ಮ, ಅಂಬಮ್ಮ ಅವರು ಉಪಾಹಾರ ತಯಾರಿಸುತ್ತಿದ್ದಾರೆ.ಮಂಡಕ್ಕಿ‌ ವಗ್ಗರಣೆ, ಉಪ್ಪಿಟ್ಟು, ಕೇಸರಿಬಾತ್, ಮಿರ್ಚಿ, ಚಹಾ ಮಾಡುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಸಿ.ಎಂ. ಭೇಟಿ ನೀಡಲಿದ್ದು, ಈಗಾಗಲೇ ಕೊಲ್ಲಾರಪ್ಪ ಮನೆ ಎದುರು ಕಾಲೊನಿಯ ಜನ ಅವರ ಸ್ವಾಗತಕ್ಕೆ ಕಾದು ನಿಂತಿದ್ದಾರೆ. ಸೇರಿದ್ದಾರೆ. ಸಿ.ಎಂ. ಜತೆಗೆ ಶಾಸಕ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಇತರೆ ಮುಖಂಡರು ಆಗಮಿಸುವರು.

'ಮುಖ್ಯಮಂತ್ರಿ ನಮ್ಮನೆಗೆ ಬರುತ್ತಿರುವುದು ಖುಷಿಯ ವಿಚಾರ. ಉಪಾಹಾರ ಬಹುತೇಕ ಸಿದ್ಧವಾಗಿದೆ. ನಮ್ಮಂಥ ಬಡವರ ಮನೆಗೆ ಅವರು ಬರುತ್ತಿರುವುದು ನಮ್ಮ ಭಾಗ್ಯ' ಎಂದು ರೇಣುಕಾ ಹೇಳಿದರು.

ಸಿಎಂ ಭೇಟಿ ಹಿನ್ನೆಲೆಯಲ್ಲಿ ಅಂಬೇಡ್ಕರ್ ಕಾಲೊನಿಯನ್ನು ಸ್ವಚ್ಛಗೊಳಿಸಿ, ರಸ್ತೆಯ ಎರಡೂ ಕಡೆಗಳಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಿಸಿದ್ದಾರೆ.

ಮುಖ್ಯಮಂತ್ರಿ ಉಪಾಹಾರ ಸೇವಿಸಲು ಬರಲಿರುವ ಹೊಸಪೇಟೆ ತಾಲ್ಲೂಕಿನ ಕಮಲಾಪುರದ ಡಾ.ಬಿ.ಆರ್. ಅಂಬೇಡ್ಕರ್ ಕಾಲೊನಿಯ ಹಿರಾಳ್ ಕೊಲ್ಲಾರಪ್ಪ ಅವರ ಮನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.