
ಕೊಟ್ಟೂರು: ಕಳೆದ ಎರಡು ದಶಗಳ ಹಿಂದೆ ಆರಂಭಗೊಂಡ ಪಾದಯಾತ್ರೆಯು ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇದಕ್ಕೆ ಅನುಗುಣವಾಗಿ ಆಗಮಿಸುವ ಭಕ್ತರ ಸೇವೆಗಾಗಿ ಸೇವಾರ್ಥಿಗಳ ಸಂಖ್ಯೆಯೂ ದ್ವಿಗುಣಗೊಳ್ಳುತ್ತಿದೆ.
ಭಕ್ತವೃಂದಕ್ಕೆ ಊಟೋಪಚಾರ, ವಸತಿ ಸೌಲಭ್ಯ, ವೈದ್ಯಕೀಯ ಸೌಕರ್ಯ ಇತ್ಯಾದಿಗಳನ್ನು ಮಾಡುವುದರಿಂದ ನಾವೂ ಸತ್ಕಾರ್ಯದಲ್ಲಿ ತೊಡಗಿದಂತಾಗುತ್ತದೆ ಎಂಬ ಮನೋಭಾವ ಸೇವಾರ್ಥಿಗಳಲ್ಲಿದೆ.
ಪಾದಯಾತ್ರೆ ಮೂಲಕ ಸ್ವಾಮಿಯ ಸ್ಮರಣೆ ಮಾಡುತ್ತಾ ಸಾಗಿ ಬಂದ ಭಕ್ತರು, ಪಟ್ಟಣದ ದ್ವಾರಬಾಗಿಲು ಸಮೀಪಿಸುತ್ತಿದ್ದಂತೆ ಕರ್ಪೂರ ಬೆಳಗಿಸಿ ಸ್ವಾಮಿಗೆ ಜೈಕಾರ, ಘೋಷಣೆಗಳೊಂದಿಗೆ ಧನ್ಯತಾಭಾವದಿಂದ ಹರ್ಷಿತರಾಗುತ್ತಾರೆ.
‘ಕಳೆದ 8 ವರ್ಷಗಳಿಂದ ಶಿವಮೊಗ್ಗದಿಂದ ಪಾದಯಾತ್ರೆಯಲ್ಲಿ ಬರುವ ನನಗೆ ಒಳ್ಳೆಯದಾಗಿದ್ದು, ನನ್ನ ಇಷ್ಟಾರ್ಥಗಳೆಲ್ಲಾ ನೆರವೇರಿವೆ’ ಎಂದು ಸಂತೋಷ್ ಹೇಳುತ್ತಾರೆ.
‘ಅನಾರೋಗ್ಯದಿಂದ ಬಳಲುತ್ತಿದ್ದಾಗ ಉತ್ತಮ ಆರೋಗ್ಯ ಕರುಣಿಸಿದರೆ ಪಾದಯಾತ್ರೆ ಕೈಗೊಳ್ಳುತ್ತೇನೆ ಎಂದು ಸ್ವಾಮಿಗೆ ಬೇಡಿಕೊಂಡಿದ್ದೆ. ಬಳಿಕ ಆರೋಗ್ಯವಾಗಿದ್ದರಿಂದ ದಾವಣಗೆರೆಯಿಂದ ಕೊಟ್ಟೂರಿಗೆ ಕಳೆದ 6 ವರ್ಷಗಳಿಂದ ಕಾಲ್ನಡಿಗೆಯಲ್ಲಿ ಬರುತ್ತಿದ್ದೇನೆ’ ಎಂದು ಗೀತಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.