ADVERTISEMENT

ಈರುಳ್ಳಿ ಬೆಲೆ ಕುಸಿತ: ಕುರಿ ಬಿಟ್ಟು ಬೆಳೆ ನಾಶಪಡಿಸಿದ ರೈತ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 16:13 IST
Last Updated 18 ಏಪ್ರಿಲ್ 2025, 16:13 IST
ಹೂವಿನಹಡಗಲಿ ತಾಲ್ಲೂಕು ಉತ್ತಂಗಿಯ ರೈತ ಮೂಲಿಮನಿ ಶರಣಪ್ಪ ಅವರು ಈರುಳ್ಳಿ ಫಸಲಿರುವ ತಮ್ಮ ಹೊಲವನ್ನು ಕುರಿ ಮೇಯಿಸಲು ಬಿಟ್ಟಿರುವುದು
ಹೂವಿನಹಡಗಲಿ ತಾಲ್ಲೂಕು ಉತ್ತಂಗಿಯ ರೈತ ಮೂಲಿಮನಿ ಶರಣಪ್ಪ ಅವರು ಈರುಳ್ಳಿ ಫಸಲಿರುವ ತಮ್ಮ ಹೊಲವನ್ನು ಕುರಿ ಮೇಯಿಸಲು ಬಿಟ್ಟಿರುವುದು   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲಾಗಿರುವ ತಾಲ್ಲೂಕಿನ ಉತ್ತಂಗಿಯ ರೈತ ಮೂಲಿಮನಿ ಶರಣಪ್ಪ, ಕಟಾವು ಹಂತದ ಈರುಳ್ಳಿ ಫಸಲು ಇರುವ ಮೂರು ಎಕರೆ ಹೊಲವನ್ನು ಶುಕ್ರವಾರ ಕುರಿ ಮೇಯಲು ಬಿಟ್ಟು ನಾಶಪಡಿಸಿದ್ದಾರೆ.

ಬೆಂಗಳೂರು ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕ್ವಿಂಟಲ್‌ಗೆ ₹1,000 ದಿಂದ ₹800ರಷ್ಟು ಮಾತ್ರ ಇದೆ. ಈರುಳ್ಳಿ ಕಿತ್ತು, ಗ್ರೇಡಿಂಗ್ ಮಾಡಿ ಮಾರುಕಟ್ಟೆಗೆ ಸಾಗಿಸಲು 50 ಕೆಜಿಯ ಪ್ರತಿ ಪಾಕೀಟ್‌ಗೆ ₹300ರಿಂದ ₹400 ಖರ್ಚು ತಗುಲುತ್ತದೆ. ಕಟಾವು, ಸಾಗಣೆ ವೆಚ್ಚದ ಹಣವೂ ಸಿಗದ ಕಾರಣ ರೈತರು ಸ್ವತಃ ಬೆಳೆ ನಾಶಕ್ಕೆ ಮುಂದಾಗಿದ್ದಾರೆ.

‘ಮೂರು ಎಕರೆಯಲ್ಲಿ ಈರುಳ್ಳಿ ಬೆಳೆಯಲು ₹1.30 ಲಕ್ಷ  ಖರ್ಚು ಮಾಡಿರುವೆ. ಸದ್ಯ ಮಾರುಕಟ್ಟೆಯಲ್ಲಿ ಬೆಲೆ ಕುಸಿದಿರುವುದರಿಂದ ಮಾರಾಟದಿಂದ ಬಂದ ಹಣ ಕಟಾವು ಖರ್ಚಿಗೂ ಸಾಲುವುದಿಲ್ಲ’ ಎಂದು ಶರಣಪ್ಪ ಹೇಳಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.