ADVERTISEMENT

ಅರಸೀಕೆರೆ: ಆಲಿಕಲ್ಲು ಮಳೆಗೆ ನೆಲಕಚ್ಚಿದ ಭತ್ತ

​ಪ್ರಜಾವಾಣಿ ವಾರ್ತೆ
Published 12 ಮೇ 2023, 11:38 IST
Last Updated 12 ಮೇ 2023, 11:38 IST
   

ಅರಸೀಕೆರೆ (ವಿಜಯನಗರ ಜಿಲ್ಲೆ): ಹೋಬಳಿಯ ಗಡಿಭಾಗದಲ್ಲಿ ಗುರುವಾರ ರಾತ್ರಿ ಸುರಿದ ಆಲಿಕಲ್ಲು ಮಳೆಗೆ ಕಟಾವು ಹಂತದಲ್ಲಿದ್ದ ಭತ್ತ ನೆಲಕಚ್ಚಿದೆ.

ರಾತ್ರಿ ಸುರಿದ ಮಳೆಗೆ ಭದ್ರ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿದ ಹಿರೇಮೆಗಳಗೆರೆ, ಲಕ್ಷ್ಮೀಪುರ, ಸಿಂಗ್ರಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಟಾವು ಹಂತದಲ್ಲಿನ ಭತ್ತದ ಬೆಳೆ ಸಂಪೂರ್ಣ ನೆಲಕ್ಕೊರಗಿದೆ.

ಭಾರಿ ಗಾಳಿಗೆ ವಡ್ಡಿನಹಳ್ಳಿ ಗ್ರಾಮದ ಸೀತಮ್ಮ ಎನ್ನುವವರ ಮನೆ ಮೇಲ್ಚಾವಣಿ ಹಾರಿದ್ದು, ದಿನ ಬಳಕೆಯ ಸಾಮಗ್ರಿಗಳು ಹಾನಿಯಾಗಿವೆ. ಬಸಾಪುರ, ಹಿರೇಮೆಗಳಗೆರೆ ಗ್ರಾಮದ ರೈತರ ಅಡಿಕೆ ಮರಗಳು ನೆಲಕ್ಕೆ ಉರುಳಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.