ಕೊಟ್ಟೂರು: ಪಟ್ಟಣದ ಉಜ್ಜಯಿನಿ ರಸ್ತೆಯ ಬಸವೇಶ್ವರ ನಗರದ ಮನೆಯೊಂದರಲ್ಲಿ ಭಾನುವಾರ ರಾತ್ರಿ ಕಳ್ಳತನವಾಗಿದೆ.
ಭಾನುವಾರ ರಾತ್ರಿ 8-45 ರ ಸುಮಾರಿಗೆಕಾರಿನಲ್ಲಿ ಬಂದ ಕಳ್ಳರ ತಂಡ ಸೀಡ್ಸ್ ಕಂಪನಿಯ ಮಾಲಿಕ ಹುಲಮನಿ ಮಲ್ಲೇಶಪ್ಪ ಅವರ ನಿವಾಸಕ್ಕೆ ನುಗ್ಗಿ ಮಾರಕಾಸ್ತ್ರ ಗಳಿಂದ ದಂಪತಿಗಳನ್ನ ಬೆದರಿಸಿ 30ಲಕ್ಷ ಹಣ ಹಾಗೂ 4 ತೊಲ ಬಂಗಾರದ ಆಭರಣಗಳನ್ನು ದೋಚಿ ಅವರನ್ನು ಮನೆಯೊಳಗೆ ಕೂಡಿಹಾಕಿ ಪರಾರಿಯಾಗಿದ್ದಾರೆ.
ಡಿವೈಎಸ್ಪಿ ಎಸ್.ಹಾಲಮೂರ್ತಿರಾವ್, ಸಿಪಿಐ ದೊಡ್ಡಣ್ಣ, ಪಿಎಸ್ಐ ನಾಗಪ್ಪ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.