ಹೊಸಪೇಟೆ (ವಿಜಯನಗರ): ತಾಲ್ಲೂಕು ಆಡಳಿತದಿಂದ ಸೋಮವಾರ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಶಂಕರಾಚಾರ್ಯರ ಜಯಂತಿ ಸರಳ ರೀತಿಯಲ್ಲಿ ಆಚರಿಸಲಾಯಿತು.
ಕೆಎಎಸ್ ಪ್ರೊಬೆಷನರಿ ಅಧಿಕಾರಿ ಹನುಮಂತಪ್ಪ ಸಿರಟ್ಟಿ ಅವರು ಶಂಕರಾಚಾರ್ಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಗ್ರೇಡ್- 2 ತಹಶೀಲ್ದಾರ್ ಮೇಘಾ, ಶಿರಸ್ತೇದಾರ್ ರಮೇಶ್, ಮಂಜುನಾಥ ಇದ್ದರು.
ಶಂಕರ ಜ್ಞಾನ ಮಂದಿರ:
ಇಲ್ಲಿನ ಎಂ.ಜೆ. ನಗರದ ಶಂಕರ ಜ್ಞಾನ ಮಂದಿರದಲ್ಲಿ ಆದಿ ಶಂಕರಾಚಾರ್ಯ ಜಯಂತಿ ಸರಳವಾಗಿ ಆಚರಿಸಲಾಯಿತು.ಶಂಕರಾಚಾರ್ಯರ ಪ್ರತಿಮೆ ಹಾಗೂ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಉದ್ಯಮಿ ಪಂತರ್ ಜಯಂತ್ ಮಾತನಾಡಿ, ‘ಶಂಕರಾಚಾರ್ಯರ ಅದ್ವೈತ ಸಿದ್ಧಾಂತ ತತ್ವದಡಿ ಅವರ ಸಂಪ್ರದಾಯಗಳನ್ನು ಸರ್ವರೂ ಬೆಳೆಸಿಕೊಳ್ಳುವ ಸಲುವಾಗಿ ಶಂಕರ ಜ್ಞಾನ ಮಂದಿರವನ್ನು 2004ರಲ್ಲಿ ನಿರ್ಮಿಸಲಾಯಿತು. ಪ್ರತಿವರ್ಷ ಶಂಕರಾಚಾರ್ಯರ ಜಯಂತಿಯನ್ನು ಅಚರಿಸಿಕೊಂಡು ಬರಲಾಗುತ್ತಿದ್ದು, ಕೋವಿಡ್ನಿಂದ ಈ ಬಾರಿ ಸರಳವಾಗಿ ಆಚರಿಸಿ, ಬಡ 108 ಮಹಿಳೆಯರಿಗೆ ಉಚಿತವಾಗಿ ಸೀರೆ ವಿತರಿಸಲಾಗಿದೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.