ADVERTISEMENT

ಹಗರಿಬೊಮ್ಮನಹಳ್ಳಿ: ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮರದ ಮೊರೆ ಹೋದ ಮುಖಂಡರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 15:39 IST
Last Updated 25 ಏಪ್ರಿಲ್ 2024, 15:39 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವಟ್ಟಮ್ಮನಹಳ್ಳಿ ಗ್ರಾಮದಲ್ಲಿ ಮರದ ನೆರಳಿನಲ್ಲಿ ಪ್ರಚಾರದ ವಾಹನವನ್ನು ನಿಲ್ಲಿಸಿ ಎಲ್‍ಬಿಪಿ ಭೀಮನಾಯ್ಕ ಮತ್ತು ಕಾಂಗ್ರೆಸ್ ಮುಖಂಡರು ಪ್ರಚಾರದ ಸಭೆ ನಡೆಸಿದರು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ವಟ್ಟಮ್ಮನಹಳ್ಳಿ ಗ್ರಾಮದಲ್ಲಿ ಮರದ ನೆರಳಿನಲ್ಲಿ ಪ್ರಚಾರದ ವಾಹನವನ್ನು ನಿಲ್ಲಿಸಿ ಎಲ್‍ಬಿಪಿ ಭೀಮನಾಯ್ಕ ಮತ್ತು ಕಾಂಗ್ರೆಸ್ ಮುಖಂಡರು ಪ್ರಚಾರದ ಸಭೆ ನಡೆಸಿದರು   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ, ಜೆಡಿಎಸ್ ಮುಖಂಡರಿಂದ ಲೋಕಸಭಾ ಚುನಾವಣೆಯ ಪ್ರಚಾರ ಕಾವೇರಿದ್ದರೆ ಅದಕ್ಕೆ ತಕ್ಕಂತೆ ಬಿಸಿಲಿನ ತಾಪವೂ ಹೆಚ್ಚತೊಡಗಿದೆ. ಸೂರ್ಯನ ಶಾಖದಿಂದ ಪಾರಾಗಲು ರಾಜಕೀಯ ಮುಖಂಡರು ಮರಗಳ ಮೊರೆ ಹೋಗುತ್ತಿದ್ದಾರೆ.

ಪ್ರಚಾರಕ್ಕೆ ಹೋದ ಕಡೆಗಳಲ್ಲಿ ಮರಗಳನ್ನು ಆಶ್ರಯಿಸುತ್ತಿದ್ದಾರೆ. ಅದರ ನೆರಳಿನಲ್ಲಿಯೇ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ. ಸ್ಥಳೀಯ ಮುಖಂಡರಿಗೆ ಮರಗಳ ಅಡಿಯಲ್ಲಿ ಸಭೆ ಆಯೋಜಿಸುವಂತೆ ಸೂಚಿಸಲಾಗಿದೆ.

ಕೆಎಂಎಫ್ ಅಧ್ಯಕ್ಷ ಎಲ್‍ಬಿಪಿ ಭೀಮನಾಯ್ಕ ಅವರು ಗುರುವಾರ ತಾಲ್ಲೂಕಿನ ಹರೇಗೊಂಡನಹಳ್ಳಿ, ಮಾಲವಿ, ಮಸಾರಿ ನೆಲ್ಕುದ್ರಿ, ಕೋಗಳಿ ತಾಂಡಾ, ಬೆಣ್ಣೆಕಲ್ಲು, ವರಲಹಳ್ಳಿ, ವಟ್ಟಮ್ಮನಹಳ್ಳಿ, ವಲ್ಲಭಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಸಭೆ ನಡೆಸಿದ್ದು ಕೂಡ ಮರಗಳ ನೆರಳಿನಲ್ಲಿಯೇ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.