ADVERTISEMENT

ಕೂಡ್ಲಿಗಿ: ಸಿಡಿಲಿಗೆ ನಾಲ್ವರ ಸಾವು

​ಪ್ರಜಾವಾಣಿ ವಾರ್ತೆ
Published 4 ಮೇ 2021, 11:44 IST
Last Updated 4 ಮೇ 2021, 11:44 IST
ಸಿಡಿಲು–ಸಾಂದರ್ಭಿಕ ಚಿತ್ರ
ಸಿಡಿಲು–ಸಾಂದರ್ಭಿಕ ಚಿತ್ರ   

ಕೂಡ್ಲಿಗಿ: ತಾಲ್ಲೂಕಿನಲ್ಲಿ ಮಂಗಳವಾರ ಮಧ್ಯಾಹ್ನ ಸಿಡಿಲು ಬಡಿದು ನಾಲ್ವರು ಮೃತಪಟ್ಟಿದ್ದಾರೆ.

ನೆಲಬೊಮ್ಮನಹಳ್ಳಿಯ ಚಿನ್ನಪ್ಪ(40), ವೀರಣ್ಣ(50), ಎಂ.ಬಿ. ಅಯ್ಯನಹಳ್ಳಿಯ ಬಿ. ಪತ್ರೆಪ್ಪ(43) ಹಾಗೂ ಹರವದಿ ಗ್ರಾಮದ ರಾಜಶೇಖರ(32) ಮೃತರು.

ಮಂಗಳವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಭಾರಿ ಗಾಳಿ ಮಳೆ ಆರಂಭವಾಗಿದೆ. ಇದರಿಂದ ನೆಲಬೊಮ್ಮನಹಳ್ಳಿಯ ಚಿನ್ನಪ್ಪ ಹಾಗೂ ವೀರಣ್ಣ ಗ್ರಾಮದ ಕಾಡಪ್ಪರ ಹೊಲದಲ್ಲಿ ಕುರಿಗಳನ್ನು ಮೇಯಿಸುತ್ತಿದ್ದಾಗ ಮಳೆ ಆರಂಭವಾಗಿದ್ದು, ಇಬ್ಬರು ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.

ADVERTISEMENT

ಎಂ.ಬಿ. ಅಯ್ಯನಹಳ್ಳಿಯ ಬಿ. ಪತ್ರೆಪ್ಪ ಮಾಳಿಗೆ ಮೇಲಿನ ಗವಾಕ್ಷಿ ಮುಚ್ಚಲು ಹೋದಾಗ ಸಿಡಿಲು ಬಡಿದಿದೆ.

ಹರವದಿ ಗ್ರಾಮದ ರಾಜಶೇಖರ ಸೂಲದಹಳ್ಳಿಯಿಂದ ತನ್ನ ಗ್ರಾಮಕ್ಕೆ ಹೋಗುವಾಗ ಕ್ಯಾಸನಕೆರೆ ಬಳಿ ಸಿಡಿಲು ಬಡಿದಿದೆ. ಎಲ್ಲರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕಂದಾಯ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.