ADVERTISEMENT

ಕೂಡ್ಲಿಗಿ: ಸಿಡಿಲು ಬಡಿದು ಎರಡು ಎತ್ತು, ಹಸು ಸಾವು

​ಪ್ರಜಾವಾಣಿ ವಾರ್ತೆ
Published 29 ಮೇ 2023, 13:20 IST
Last Updated 29 ಮೇ 2023, 13:20 IST
ಕೂಡ್ಲಿಗಿ ತಾಲ್ಲೂಕಿನ ಅರ್ಜುನಚಿನ್ನನಹಳ್ಳಿ ಗ್ರಾಮದಲಿ ಸಿಡಿಲು ಬಡಿರು ಮೃತಪಟ್ಟ ಎತ್ತುಗಳು ಹಾಗೂ ಹಸು
ಕೂಡ್ಲಿಗಿ ತಾಲ್ಲೂಕಿನ ಅರ್ಜುನಚಿನ್ನನಹಳ್ಳಿ ಗ್ರಾಮದಲಿ ಸಿಡಿಲು ಬಡಿರು ಮೃತಪಟ್ಟ ಎತ್ತುಗಳು ಹಾಗೂ ಹಸು    

ಕೂಡ್ಲಿಗಿ: ತಾಲ್ಲೂಕಿನ ಅರ್ಜುನಚಿನ್ನನಹಳ್ಳಿಯಲ್ಲಿ ಸಿಡಿಲು ಬಡಿದು ಎರಡು ಎತ್ತು ಹಾಗೂ ಒಂದು ಹಸು ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಗುಡೇಕೋಟೆ ಹೋಬಳಿಯ ಆರ್ಜುನಚಿನ್ನನಹಳ್ಳಿ ಸುತ್ತ ಮುತ್ತ ಸಂಜೆ 4 ಗಂಟೆ ಸುಮಾರಿಗೆ ಗುಡುಗು ಸಹಿತ ಮಳೆ ಆರಂಭವಾಗಿದೆ. ಈ ವೇಳೆ ಹೊಲದಲ್ಲಿನ ಮರದಡಿ ಕಟ್ಟಿಹಾಕಿದ್ದ ಗ್ರಾಮದ ಸುರೇಶ್ ಎಂಬ ರೈತನಿಗೆ ಸೇರಿದ ಎರಡು ಎತ್ತು ಹಾಗೂ ಒಂದು ಹಸುವಿಗೆ ಸಿಡಿಲು ಬಡಿದು, ಮೂರು ಜಾನುವಾರುಗಳು ಸ್ಥಳದಲ್ಲಿಯೇ ಮೃತಪಟ್ಟಿವೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT