ತಾಂಬಾ: ಬರುವ ಸಾವ್ರರ್ತಿಕ ಚುನಾವಣೆಯಲ್ಲಿ ಬಿಜಾಪುರ ನಗರದಿಂದ ಕಾಂಗ್ರೆಸ್ ಪಕ್ಷದಿಂದ ಅಲ್ಪಸಂಖ್ಯಾತರ ಮುಖಂಡ ಎಲ್.ಎಲ್.ಉಸ್ತಾದ್ ಅವರಿಗೆ ಟಿಕೆಟ್ ಕೊಡಬೇಕೆಂದು ಗ್ರಾಮದ ಅಂಜುಮನ್ ಇಸ್ಲಾಂ ಕಮಿಟಿ ಒತ್ತಾಯಿಸಿದೆ. ಜಿಲ್ಲೆಯಯಲ್ಲಿ ಅಲ್ಪ ಸಂಖ್ಯಾತರು ಕಡೆಕಣಿಸಿದರೆ ಪಕ್ಷಕ್ಕೆ ಹಾನಿಗುತ್ತದೆ.
ಜಿಲ್ಲೆಯಲ್ಲಿ ಅಲ್ಪಸಂಖ್ಯಾತರು ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಎಲ್.ಎಲ್.ಉಸ್ತಾದರವರಿಗೆ ಈ ಸಲದ ಚುನಾವಣೆಯಲ್ಲಿ ವಿಜಾಪೂರ ನಗರದಿಂದ ಸ್ಪರ್ಧಿಸಿದರೆ ಜಯ ಗಳಿಸುವುದು ಖಚಿತ ಎಂದು ಕಮಿಟಿ ಅಧ್ಯಕ್ಷರಾದ ಸಾಹೇಬಲಾಲ್ ನಾಗಾವಿ ಹಾಗೂ ಕಾಂಗ್ರೆಸ್ ಮುಂಖಡ ಮೊಹಮ್ಮದ್ ವಾಲೀಕಾರ, ಮೊಹಮ್ಮದ್ ದಂಡೆದ ಇತರರು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.