ಇಂಡಿ: ಮಹಾರಾಷ್ಟ್ರದ ಭೀಮಾ ನದಿ ಪಾತ್ರದಲ್ಲಿ ಮಳೆಯ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ 60 ಸಾವಿರ ಕ್ಯುಸೆಕ್ ಮತ್ತು ವೀರ ಭಟಕರ ಜಲಾಶಯದಿಂದ ಭೀಮಾ ನದಿಗೆ 65 ಸಾವಿರ ಕ್ಯುಸೆಕ್ ನೀರು ಭಾನುವಾರ 8 ಗಂಟೆಗೆ ಹರಿಯ ಬಿಡಲಾಗಿದೆ. ಅದು ಚಡಚಣ ತಾಲ್ಲೂಕಿನ ದಸೂರ ಗ್ರಾಮಕ್ಕೆ ಸೋಮವಾರ ಸಂಜೆ ಬರುವ ನಿರೀಕ್ಷೆ ಇದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ ತಿಳಿಸಿದ್ದಾರೆ.
ಭೀಮಾ ನದಿ ಪಾತ್ರದ ಉಜನಿ ಮತ್ತು ವೀರ ಭಟಕರ ಜಲಾಶಯ ಭರ್ತಿಯಾಗಿದ್ದು, ಈ ಎರಡೂ ಜಲಾಶಯಗಳಿಗೆ ಒಳಹರಿದು ಬರುವ ಎಲ್ಲಾ ನೀರನ್ನು ಭೀಮಾ ನದಿ ಪಾತ್ರಕ್ಕೆ ನೇರವಾಗಿ ಬಿಡಲಾಗುವುದು. ಸೋಮವಾರದಿಂದ ಇನ್ನೂ ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾಧ್ಯತೆ ಇದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.