ADVERTISEMENT

‘ವಿಶ್ವಕ್ಕೆ ಬಸವಣ್ಣವರ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 10 ಮೇ 2024, 15:48 IST
Last Updated 10 ಮೇ 2024, 15:48 IST
ಹೊರ್ತಿ  ಸಮೀಪದ ಜಿಗಜೇವಣಿ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಬಸವೇಶ್ವರರ ಭಾವಚಿತ್ರಕ್ಕೆ ಜಿಗಜೇವಣಿ ಗ್ರಾಮದ ಹಿರಿಯ ಮುಖಂಡ ಶಾಂತುಗೌಡ ರಾ. ಬಿರಾದಾರ ಪೂಜೆ ಸಲ್ಲಿಸಿದರು. ಶ್ರೀಮಂತ ಕಾ. ಬಿರಾದಾರ, ನಿಂಗಪ್ಪ ಬಿ. ಗುಡ್ಡದ, ಗುರಪ್ಪ ತು.ಝಳಕಿ, ಕಾಂತಪ್ಪ ರಂ. ಬಿರಾದಾರ ಇದ್ದರು
ಹೊರ್ತಿ  ಸಮೀಪದ ಜಿಗಜೇವಣಿ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಬಸವೇಶ್ವರರ ಭಾವಚಿತ್ರಕ್ಕೆ ಜಿಗಜೇವಣಿ ಗ್ರಾಮದ ಹಿರಿಯ ಮುಖಂಡ ಶಾಂತುಗೌಡ ರಾ. ಬಿರಾದಾರ ಪೂಜೆ ಸಲ್ಲಿಸಿದರು. ಶ್ರೀಮಂತ ಕಾ. ಬಿರಾದಾರ, ನಿಂಗಪ್ಪ ಬಿ. ಗುಡ್ಡದ, ಗುರಪ್ಪ ತು.ಝಳಕಿ, ಕಾಂತಪ್ಪ ರಂ. ಬಿರಾದಾರ ಇದ್ದರು   

ಹೊರ್ತಿ: ‘ವಿಶ್ವಕ್ಕೆ ಮಹಾನ್ ಮಾನವತಾವಾದಿ, ಸಮಾನತೆಯ ಹರಿಕಾರ, ಭಕ್ತಿ ಭಂಡಾರಿ ಬಸವೇಶ್ವರರ ಕೊಡುಗೆ ಅಪಾರ’ ಎಂದು ಜಿಗಜೇವಣಿ ಗ್ರಾಮದ ಹಿರಿಯ ಮುಖಂಡ ಶಾಂತುಗೌಡ ರಾ. ಬಿರಾದಾರ ಹೇಳಿದರು.

ಸಮೀಪದ ಜಿಗಜೇವಣಿ ಗ್ರಾಮದ ಬಸವ ವೃತ್ತದಲ್ಲಿ ಶುಕ್ರವಾರ ಬಸವ ಜಯಂತಿ ಆಚರಣೆ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಬಸವಣ್ಣನವರ ವಚನಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಜ್ಞಾನದ ದೀವಿಗೆ ಹಚ್ಚಿ’ ಎಂದರು.

ADVERTISEMENT

ಜಿಗಜೇವಣಿ ಗ್ರಾಮದ ಹಿರಿಯ ಮುಖಂಡ ಶಾಂತುಗೌಡ ರಾ. ಬಿರಾದಾರ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಶ್ರಿಮಂತ ಕಾ.ಬಿರಾದಾರ, ನಿಂಗಪ್ಪ ಬಿ. ಗುಡ್ಡದ, ಗುರಪ್ಪ ತು.ಝಳಕಿ, ಕಾಂತಪ್ಪ ರಂ.ಬಿರಾದಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.