ADVERTISEMENT

ಬೈಕ್ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 17:32 IST
Last Updated 25 ನವೆಂಬರ್ 2020, 17:32 IST

ನಾಲತವಾಡ: ಇಲ್ಲಿಗೆ ಸಮೀಪದ ಬಲದಿನ್ನಿ ಗ್ರಾಮದ ಸಮೀಪ ಬೈಕ್ ಸವಾರ ಆಯತಪ್ಪಿ ರಸ್ತೆ ಪಕ್ಕದ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ಲಿಂಗಸೂರು ತಾಲ್ಲೂಕಿನ ನಾಗಲಾಪುರ ನಿವಾಸಿ ರಮೇಶ ವಡ್ಡರ ಮೃತಪಟ್ಟವರು. ನಾಗಲಾಪುರದಿಂದ ನಾಲತವಾಡ ಮಾರ್ಗವಾಗಿ ಬಲದಿನ್ನಿಗೆ ಹೋಗುವಾಗ ದುರ್ಘಟನೆ ಸಂಭವಿಸಿದೆ.

ಮುದ್ದೇಬಿಹಾಳ ಪಿಎಸ್‌ಐ ಮಲ್ಲಪ್ಪ ಮಡ್ಡಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.