ವಿಜಯಪುರ: ಸಿದ್ಧಸಿರಿ ಸೌಹಾರ್ದ ಸಹಕಾರಿ ವತಿಯಿಂದ ಯುಗಾದಿಯಿಂದ ಯುಗಾದಿಯವರೆಗೆ ಸಂಪೂರ್ಣ ಪಂಚಾಂಗ ಮಾಹಿತಿಯನ್ನೊಳಗೊಂಡ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.
ನಗರದ ಸಿದ್ಧಸಿರಿ ಸೌಹಾರ್ದ ಸಹಕಾರಿ ಪ್ರಧಾನ ಕಚೇರಿ ಸಭಾಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿಪಂಚಾಂಗ ಬಿಡುಗಡೆ ಮಾಡಲಾಯಿತು.
ಈ ಕ್ಯಾಲೆಂಡರ್ನಲ್ಲಿ 2022ನೇ ವರ್ಷದ ಕಾಲಮಾನದ ಸಂಪೂರ್ಣ ಪಂಚಾಂಗ ಮಾಹಿತಿಯನ್ನೊಳಗೊಂಡ ವಿಷಯಗಳನ್ನುಗುರುರಾಜ ಆಚಾರ್ಯ ಹೆರಕಲ್ ನೀಡಿದ್ದಾರೆ.
ಕ್ಯಾಲೆಂಡರ್ನ25 ಸಾವಿರ ಪ್ರತಿಗಳನ್ನು ರಾಜ್ಯದ್ಯಂತ ಇರುವ ಸಿದ್ಧಸಿರಿ ಸೌಹಾರ್ದ ಸಹಕಾರಿಯ ಎಲ್ಲ ಶಾಖೆಗಳ ಗ್ರಾಹಕರಿಗೆ ಒದಗಿಸಲು ನಿರ್ಧರಿಸಲಾಗಿದೆ.
ಸಿದ್ಧಸಿರಿ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಬಸಯ್ಯ ಹಿರೇಮಠ, ನಿರ್ದೇಶಕರಾದ ಶೈಲಜಾ ಪಾಟೀಲ ಯತ್ನಾಳ, ಸೀಮಾ ಕೋರೆ, ಸಾಯಿಬಾಬಾ ಸಿಂದಗೇರಿ, ಶಿವಾನಂದ ಅಣ್ಣೆಪ್ಪನವರ, ಜಗದೀಶ ಕ್ಷತ್ರಿ, ವ್ಯವಸ್ಥಾಪಕ ನಿರ್ದೇಶಕರಾದ ಜೊತಿಬಾ ಖಂಡಾಗಳೆ, ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ರಾಘವ ಅಣ್ಣಿಗೇರಿ, ಮಹಾಪ್ರಬಂಧಕರಾಶದ ಉಮಾದೇವಿ ಹಿರೇಮಠ, ಮಾರುತಿ ಸಾಲ್ಗುಡೆ, ಈರೇಶ ಕೋರೆ, ಸಿಬ್ಬಂದಿ ರಾಜೇಂದ್ರ ಬಳಶಂಕರ, ಮಲ್ಲಿಕಾರ್ಜುನ ಮನಗೂಳಿ, ಶಿವಾನಂದ ದೊಡ್ಡಮನಿ, ಮಹೇಶ ಕಗ್ಗೋಡ, ಪ್ರವೀಣ ಚನ್ನಾ, ಶಿವಾನಂದ ಕಸಬೇಗೌಡರ, ಸಂತೋಷ ಅವಟಿ, ಚೇತನ ಮಮದಾಪೂರ, ರವಿ ಖ್ಯಾಡಿ, ಕಾಶಿನಾಥ ಗಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.