ತಾಳಿಕೋಟೆ: ಪಟ್ಟಣದಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಒಳ ಮೀಸಲಾತಿ ಜಾತಿ ಗಣತಿ ಕಾರ್ಯವನ್ನು ತಹಶೀಲ್ದಾರ್ ವಿನಯಾ ಹೂಗಾರ ಸೋಮವಾರ ಪರಿಶೀಲಿಸಿದರು.
ಪಟ್ಟಣದ ಭಾಗ ಸಂಖ್ಯೆ 41ರ ವ್ಯಾಪ್ತಿಯ ವಡ್ಡರ ಓಣಿಯಲ್ಲಿ ಗಣತಿ ಕಾರ್ಯ ನಡೆಯುತ್ತಿರುವಾಗ ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಶಿರಸ್ತೇದಾರ ಜೆ.ಆರ್. ಜೈನಾಪೂರ, ಸಿಆರ್ಪಿ ರಾಜು ವಿಜಾಪುರ, ಸಮಾಜ ಕಲ್ಯಾಣ ಇಲಾಖೆಯ ಎಸ್.ಎನ್. ಮಲ್ಲಾಡೆ, ಎಸ್.ಎಂ. ಕಲಬುರ್ಗಿ ಹಾಗೂ ಶಿಕ್ಷಕ ಸುರೇಶ ಬೀರಗೊಂಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.