ಮುದ್ದೇಬಿಹಾಳ: ತಾಲ್ಲೂಕಿನ ಕುಂಚಗನೂರ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಶನಿವಾರ ಎತ್ತುಗಳ ಮೈ ತೊಳೆಯಲು ಹೋದ ವೇಳೆ ಮೊಸಳೆ ದಾಳಿಗೆ ಬಲಿಯಾದ ರೈತ ಕಾಶಪ್ಪ ಕಂಬಳಿ ಕುಟುಂಬಕ್ಕೆ ಶಾಸಕ ಸಿ.ಎಸ್.ನಾಡಗೌಡ ಸೋಮವಾರ ಸಾಂತ್ವನ ಹೇಳಿದರು.
ಇದೇ ವೇಳೆ ಶಾಸಕರು ₹ 25 ಸಾವಿರ ವೈಯಕ್ತಿಕ ಸಹಾಯಧನ ನೀಡಿದರು. ಸರ್ಕಾರದಿಂದ ಬರುವ ಪರಿಹಾರ ದೊರಕಿಸಿಕೊಡುವುದಾಗಿಯೂ ಕುಟುಂಬಕ್ಕೆ ಭರವಸೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮುಖಂಡ ಎಸ್.ಎಸ್.ಹುಲ್ಲೂರ, ಎನ್.ಎಸ್. ದೇಶಮುಖ, ಮಲಿಕಸಾಬ್ ನದಾಫ್, ಶ್ರೀಶೈಲ್ ಮರೋಳ, ರಾಜುಗೌಡ ಕೊಂಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.