ವಿಜಯಪುರ: ನಗರದಲ್ಲಿ ಇತ್ತೀಚೆಗೆ ನಡೆದ ಟಿಪ್ಪರ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಜಯಪುರ ರಹಿಂನಗರದ ರವಿ ಜಾಮಗೊಂಡ(27),ಶಿವಾನಂದ ಕಾಲೆಬಾಗ(36),ಶ್ರೀಶೈಲ್ ಗಾಂಜಿ (31), ಸೋಲಾಪುರದಗೌರಿಶಂಕರ ಚೌಗಲೆ(43) ಹಾಗೂಇಕ್ರಾರ್ ನಾಯಿಕವಾಡಿ(28) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿತರ ಕಡೆಯಿಂದ ಎರಡು ಟಿಪ್ಪರಗಳ ಬಿಡಿ ಭಾಗಗಳು, ₹1.50 ಲಕ್ಷ ನಗದು, ಕೃತ್ಯಕ್ಕೆ ಬಳಸಿದ ಒಂದು ಟಾಟಾ ಸುಮೋ ವಶಪಡಿಸಿಕೊಳ್ಳಲಾಗಿದೆ.
ಡಿವೈಎಸ್ಪಿ ಕೆ.ಸಿ.ಲಕ್ಷ್ಮೀನಾರಾಯಣ,ಗೋಳಗುಮ್ಮಟ ಸಿಪಿಐ ರಮೇಶ ಸಿ. ಅವಜಿ, ಗೋಳಗುಮ್ಮಟ ಠಾಣೆ ಪಿಎಸ್ಐ ಶಿವಾಜಿ ಪವಾರ, ಆದರ್ಶನಗರ ಠಾಣೆಯ ಎಸ್. ಸಿ. ಗುರುಬೆಟ್ಟಿ ಮತ್ತು ಸಿಬ್ಬಂದಿಗಳಾದ ಪಿ.ಆರ್. ಹಿಪ್ಪರಗಿ, ಎಂ.ಎ. ಜಾಧವ, ಬಿ.ಎನ್. ನಿಡೋಣಿ, ಪುಂಡಲಿಕ ಬಿರಾದಾರ, ಎಸ್.ಜಿ. ಗಾಯನ್ನವರ, ಮಹೇಶ ಸಾಲಿಕೇರಿ, ಎಸ್.ಎ. ಬನಪಟ್ಟಿ, ಜೆ. ಎಸ್. ವನಜಕರ, ಸದಾಶಿವ ಕಲಾದಗಿ, ಅಕ್ಬರ ಗೊಲಗೇರಿ, ಯೋಗೇಶ ಮಾಳಿ, ಎಸ್. ಎಸ್. ಮಸಳಿ, ಬಸವರಾಜ ರೋಣಿಹಾಳ, ಆನಂದ ಕಂಬಾರ, ರಾಜು ಮರೆಗುದ್ದಿ, ಆನಂದಯ್ಯ ವಿ.ಪೂಜಾರಿ, ಗುಂಡು ಗಿರಣಿವಡ್ಡರ, ಸುನೀಲ ಗೌಳಿ, ಎಂ.ಎ. ಬಾಗವಾನ, ನಿಂಗಪ್ಪ ವಠಾರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.