ADVERTISEMENT

ಕಾರು ಡಿಕ್ಕಿ: 8 ಕುರಿಗಳು ಸಾವು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 15:38 IST
Last Updated 3 ಆಗಸ್ಟ್ 2022, 15:38 IST

ನಿಡಗುಂದಿ(ವಿಜಯಪುರ): ತಾಲ್ಲೂಕಿನ ಅಬ್ಬಿಹಾಳ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಕುರಿ ಹಿಂಡಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 8 ಕುರಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಆರು ಕುರಿಗಳು ಗಂಭೀರವಾಗಿ ಗಾಯಗೊಂಡಿವೆ.

ಬೇನಾಳ ಎನ್.ಎಚ್. ಗ್ರಾಮದ ಅಶೋಕ ಬೆಳ್ಳೆಪ್ಪ ದಿಂಡವಾರ ಅವರಿಗೆ ಸೇರಿದ ಈ 14 ಕುರಿಗಳ ಹಿಂಡು ಮೇಯಲು ಹೊಲಕ್ಕೆ ಹೋಗಿದ್ದವು. ಹೆದ್ದಾರಿ ದಾಟುವಾಗ ಏಕಾಏಕಿ ಈ ಘಟನೆ ಬುಧವಾರ ಸಂಜೆ ಜರುಗಿದೆ.

ಆರು ಕುರಿಗಳಿಗೆ ಗಂಭೀರ ಗಾಯವಾಗಿದ್ದು, ಅವು ಕೂಡಾ ಬದಕುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಮೊದಲಿಗೆ ಬೈಕ್ ಸವಾರನೊಬ್ಬ ಒಂದು ಕುರಿಗೆ ಡಿಕ್ಕಿ ಹೊಡೆಸಿದಾಗ, ಇನ್ನುಳಿದ ಕುರಿಗಳು ಬೆದರಿ ಏಕಾಏಕಿ ರಸ್ತೆಗೆ ಬಂದ ಕಾರಣ, ರಭಸದಿಂದ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆಯಿತು ಎನ್ನಲಾಗಿದೆ.

ADVERTISEMENT

ನಿಡಗುಂದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು. ಕುರಿ ಅಭಿವೃದ್ದಿ ನಿಗಮದಿಂದ ಕುರಿ ಮಾಲೀಕರಿಗೆ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.