
ಇಂಡಿ ತಾಲ್ಲೂಕಿನ ನಾದ (ಕೆಡಿ) ಗ್ರಾಮದಲ್ಲಿರುವ ಜಮಖಂಡಿ ಸುಗರ್ಶ್ ಘಟಕ-2ರ ಬಳಿ ಕಬ್ಬಿಗೆ ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಬುಧವಾರದಿಂದ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು
ಇಂಡಿ: ತಾಲ್ಲೂಕಿನ ನಾದ (ಕೆಡಿ) ಗ್ರಾಮದಲ್ಲಿರುವ ಜಮಖಂಡಿ ಸುಗರ್ಶ್ ಘಟಕ-2 ಸಕ್ಕರೆ ಕಾರ್ಖಾನೆಯ ಎದುರು ಬುಧವಾರದಿಂದ ರೈತರು ಕಬ್ಬಿಗೆ ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕೆಲವು ಕಾರ್ಖಾನೆಗಳು ಕಬ್ಬಿಗೆ ದರ ನಿಗದಿಪಡಿಸಿವೆ. ಅವುಗಳಂತೆ ನೀವೂ ಕೂಡ ದರ ನಿಗದಿಪಡಿಸಿ, ಕಾರ್ಖಾನೆ ಪ್ರಾರಂಭಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಕರವೇ ಅಧ್ಯಕ್ಷ ಬಾಳು ಮುಳಜಿ, ಅಂಬುರಾಯ ಕವಟಗಿ, ಶರಣಪ್ಪ ಸಂಗೋಗಿ, ಸಂಗಪ್ಪ ದೇವರಮನಿ, ವಿಜಯ ರಾಠೋಡ, ಧರ್ಮರಾಜ ಸಾಲೋಟಗಿ, ಸುರೇಶ ಗುಲಕರ್ಣಿ, ಕಲ್ಯಾಣಿ ಹಿಟ್ನಳ್ಳಿ, ಕಾಂತಪ್ಪ ಗೂಗದಡ್ಡಿ ಶರಣು ರಾವೂರ, ಸಿದ್ದಾರಾಮ ಕಲಶೆಟ್ಟಿ, ಸುರೇಶ ರಜಪೂತ, ಬಸವರಾಜ ಠಕ್ಕಾ, ಅಶೋಕ ಬೇಡ್ಕರ, ಶರಣಪ್ಪ ಹಂಜಗಿ, ಶ್ರೀಶೈಲ ಮದರಿ, ಯಲ್ಲು ಹಳ್ಳಿ, ಅಶೋಕ ಬಿರಾದಾರ, ಸಂಗಣ್ಣ ದವಟಗಿ, ಭೀಮರಾಯ ಹಳೆಂಬರ, ಶಿವಲಿಂಗ ನಾಗಠಾಣ, ಶ್ಯಾಮ ಹೊಸಮನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.