ADVERTISEMENT

ಮೃತ ರೌಡಿಶೀಟರ್‌ಗಳ ಸಮಾಧಿಗೆ ಪುಷ್ಪಾರ್ಚನೆ!

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 15:48 IST
Last Updated 30 ಅಕ್ಟೋಬರ್ 2019, 15:48 IST
ಚಡಚಣ ತಾಲ್ಲೂಕು ಕೊಂಕನಗಾಂವ ಗ್ರಾಮದಲ್ಲಿರುವ ಧರ್ಮರಾಜ ಚಡಚಣ ಹಾಗೂ ಗಂಗಾಧರ ಚಡಚಣ ಅವರ ಸಮಾಧಿ ಬಳಿ ಬುಧವಾರ ಸೇರಿದ್ದ ಅಭಿಮಾನಿಗಳು
ಚಡಚಣ ತಾಲ್ಲೂಕು ಕೊಂಕನಗಾಂವ ಗ್ರಾಮದಲ್ಲಿರುವ ಧರ್ಮರಾಜ ಚಡಚಣ ಹಾಗೂ ಗಂಗಾಧರ ಚಡಚಣ ಅವರ ಸಮಾಧಿ ಬಳಿ ಬುಧವಾರ ಸೇರಿದ್ದ ಅಭಿಮಾನಿಗಳು   

ವಿಜಯಪುರ: ನಕಲಿ ಎನ್‌ಕೌಂಟರ್‌ ಹಾಗೂ ನಿಗೂಢವಾಗಿ ಹತ್ಯೆಯಾಗಿರುವ ರೌಡಿ ಶೀಟರ್‌ಗಳಾದ ಧರ್ಮರಾಜ ಚಡಚಣ ಹಾಗೂ ಇವರ ಸಹೋದರ ಗಂಗಾಧರ ಚಡಚಣ ಅವರ ಸಮಾಧಿಗೆ ಅಭಿಮಾನಿಗಳು ಬುಧವಾರ ಪುಷ್ಪಾರ್ಚನೆ ಮಾಡಿದರು.

2017ರ ಅಕ್ಟೋಬರ್ 30ರಂದು ಧರ್ಮರಾಜ ಚಡಚಣ ಅವರ ಎನ್‌ಕೌಂಟರ್‌ ನಡೆದಿತ್ತು. ಇದೇ ದಿನ ಇವರ ಸಹೋದರ ಗಂಗಾಧರ ಚಡಚಣ ಅವರನ್ನು ನಿಗೂಢವಾಗಿ ಕೊಲೆ ಮಾಡಲಾಗಿತ್ತು.

ಇವರಿಬ್ಬರೂ ಮೃತಪಟ್ಟು ಎರಡು ವರ್ಷಗಳಾದ್ದರಿಂದ ಚಡಚಣ ತಾಲ್ಲೂಕಿನ ಕೊಂಕನಗಾಂವ ಗ್ರಾಮದಲ್ಲಿರುವ ಅವರ ಸಮಾಧಿಗೆ ಭೇಟಿ ನೀಡಿದ ಅಭಿಮಾನಿಗಳು ಪುಷ್ಪಾರ್ಚನೆ ಮಾಡಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದರು.

ADVERTISEMENT

ಇವರಿಬ್ಬರ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಆರೋಪಿ ಶಿವಾನಂದ ಬಿರಾದಾರ ದೀಪಾವಳಿ ಹಬ್ಬದ ದಿನ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಸದ್ದು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.