ವಿಜಯಪುರ:ತುಂತುರು ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ಹಾನಿಯಾಗಿರುವ ದ್ರಾಕ್ಷಿ ತೋಟಗಳಿಗೆ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ವಿಜ್ಞಾನಿಗಳು ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಒಳಗೊಂಡ ತಂಡ ಭೇಟಿ ನೀಡಿ ಸಮೀಕ್ಷೆ ನಡೆಸಿತು.
ಬಬಲೇಶ್ವರ ತಾಲ್ಲೂಕಿನ ರೈತರ ವಿವಿಧ ಗ್ರಾಮಗಳ ಭೇಟಿ ನೀಡಿದ ತಂಡವು ಹೂವು, ಕಾಯಿ ಉದುರದಂತೆ ತಡೆಯುವಕ್ರಮಗಳ ಬಗ್ಗೆ ರೈತರಿಗೆ ಸಲಹೆ ನೀಡಿದರು.
ಶೇಗುಣಸಿಯ ಸಂತೋಷ ಸುತಗುಂಡಿ, ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದಅಧ್ಯಕ್ಷ ಡಾ.ಕೆ ಎಚ್. ಮುಂಬಾರೆಡ್ಡಿ, ತಂಡದ ಮುಖ್ಯಸ್ಥರಾದಡಾ.ಎಸ್. ಜಿ. ಗೊಳ್ಳಗಿ ಹಾಗೂ ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ರಮೇಶ್ ರಾಠೋಡ,ತೋಟಗಾರಿಕೆ ಉಪನಿರ್ದೇಶಕಎಸ್. ಎಂ. ಬರಗಿಮಠ, ನಾಗೇಂದ್ರ ಗೊರನಾಳ, ಗುರುನಾಥ್ ಬುದ್ನಿ, ಸುನಂದಾ ಉಪಸ್ಥಿತರಿದ್ದರು.
ಡಿಸಿ ಭೇಟಿ:
ಹವಾಮಾನ ವೈಪರಿತ್ಯದಿಂದಾಗಿ ಬೆಳೆ ಹಾನಿಯಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯಪುರ ತಾಲ್ಲೂಕಿನ ಅರಕೇರಿ ಎಲ್. ಟಿ.1, ಅಗಸನಾಳ, ಇಂಡಿ ತಾಲ್ಲೂಕಿನ ಹೊರ್ತಿ, ಹಳಗುಣಕಿ ಮತ್ತು ಚಡಚಣ ತಾಲ್ಲೂಕಿನ ವಿವಿಧ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ ಬೆಳೆ ಹಾನಿ ವೀಕ್ಷಣೆ ಮಾಡಿದರು. ಅಲ್ಲದೇ, ದ್ರಾಕ್ಷಿ ಮತ್ತು ತೊಗರಿ ಬೆಳೆ ಹಾಳಾಗಿರುವುದನ್ನು ಪರಿಶೀಲನೆ ನಡೆಸಿದರು.
ವಿಜಯಪುರ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್. ಎಂ. ಬರಗಿಮಠ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ರಾಜಶೇಖರ ವಿಲಿಯಮ್ಸ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.