ADVERTISEMENT

ತುಂಬಿ ಹರಿದ ಹಳ್ಳಗಳು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 2:45 IST
Last Updated 13 ಅಕ್ಟೋಬರ್ 2020, 2:45 IST
ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ದೇವಾಲಯದ ಹತ್ತಿರ ಬಾಂದಾರ ಮೈದುಂಬಿ ಹರಿಯುತ್ತಿದೆ
ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ದೇವಾಲಯದ ಹತ್ತಿರ ಬಾಂದಾರ ಮೈದುಂಬಿ ಹರಿಯುತ್ತಿದೆ   

ತಿಕೋಟಾ: ತಾಲ್ಲೂಕಿನಲ್ಲಿ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಹೊನವಾಡ, ಬಿಜ್ಜರಗಿ, ಹುಬನೂರ, ಟಕ್ಕಳಕಿ, ಘೋಣಸಗಿ, ಕಳ್ಳಕವಟಗಿ, ಸೋಮದೇವರಹಟ್ಟಿ ಭಾಗದ ಹಳ್ಳಗಳು ತುಂಬಿ ಹರಿಯುತ್ತಿವೆ.

ಮಳೆಯಿಂದ ತುಂಬಿದ ಬಾಂದಾರಗಳು ಜಲಪಾತದಂತೆ ಧುಮುಕಿ ನೋಡುಗರನ್ನು ತನ್ನತ್ತ ಸೆಳೆಯುತ್ತಿದೆ. ಯುವಕರಿಗೆ ಸೆಲ್ಫಿ ತಾಣಗಳೂ ಆಗಿವೆ.

ತಾಲ್ಲೂಕಿನ ಕಳ್ಲಕವಟಗಿ ಗ್ರಾಮದ ಸಂಗಮನಾಥ ದೇವಾಲಯದ ಹತ್ತಿರ ಇರುವ ಬಾಂದಾರವು ಮೈದುಂಬಿ ಹರಿಯುತ್ತಿದೆ. ಹಳ್ಳದಲ್ಲಿರುವ ಸಂಗಮನಾಥ ದೇವಾಲಯ ಜಲಾವೃತವಾಗಿದೆ.

ADVERTISEMENT

ರೈತರಿಗೆ ಸಂಕಷ್ಟ: ಜಿಟಿ ಜಿಟಿ ಮಳೆಯಿಂದಾಗಿ ದ್ರಾಕ್ಷಿ ಬೆಳೆಗಾರರಿಗೆ ಔಷಧ ಸಿಂಪಡಿಸಲು ಆಗುತ್ತಿಲ್ಲ. ಔಷಧ ಹೊಡೆಯದಿದ್ದರೆ ಬಳೆ ಹಾಳಾಗುವ ಆತಂಕದೊಂದಿಗೆ, ದುಬಾರಿ ಬೆಲೆಯ ಔಷಧ ಸಹ ಹಾಳಾಗುವ ಆತಂಕ ಎದುರಾಗಿದೆ.

ತೊಗರಿ ಬೆಳೆಯಲ್ಲಿ ಕಾಣಿಸಿಕೊಂಡಿರುವ ಕೀಟಗಳ ನಿಯಂತ್ರಣಕ್ಕೆ ಔಷಧ ಹೊಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ರೈತರು ಕಂಗಾಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.