ADVERTISEMENT

ಸಮ್ಮೇಳನದ ಮಾದರಿ ಲೋಗೊ ರಚನೆಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 15:41 IST
Last Updated 10 ಆಗಸ್ಟ್ 2022, 15:41 IST

ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ನವೆಂಬರ್‌ನಲ್ಲಿ ನಗರದಲ್ಲಿ ನಡೆಯಲಿರುವ 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಸಮ್ಮೇಳನದ ಲೋಗೊ ರಚಿಸಿ, ಕಳುಹಿಸಲು ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿಜಯಪುರ ಜಿಲ್ಲೆಯ ಐತಿಹಾಸಿಕವಾಗಿದ್ದು, ಶರಣರು, ಸೂಫಿಸಂತರು ನೆಲವೀಡು. ಆಲಮಟ್ಟಿ ಜಲಾಶಯವೂ ಜಿಲ್ಲೆಯ ಒಡಲಲ್ಲಿದೆ. ಶರಣರ ನಾಡು, ದ್ರಾಕ್ಷಿಯ ಬೀಡು ಆಗಿದೆ. ಸೈಕ್ಲಿಂಗ್ ಕಣಜವೂ ಆಗಿದೆ. ಮಾತ್ರವಲ್ಲ. ಹೆಸರಾಂತ ಪತ್ರಕರ್ತರ ಜಿಲ್ಲೆಯೂ ಆಗಿದೆ. ಹಾಗಾಗಿ ಲೋಗೊದಲ್ಲಿ ಜಿಲ್ಲೆಯ ಸಮಗ್ರತೆ ಬಿಂಬಿಸುವ ಲೋಗೊಗಳನ್ನು ಜಿಲ್ಲೆಯ ಕಲಾವಿದರು ರಚಿಸಿ ಕಳುಹಿಸಿ ಕೊಡಬಹುದಾಗಿದೆ.

ಆಗಸ್ಟ್‌ 20 ಕೊನೆ ದಿನ. ಕಲಾವಿದರು ರಚಿಸಿದ ಮಾದರಿ ಲೋಗೊ ಹಾಗೂ ಅದರ ಕೆಳಗೆ ವಿವರ ನೀಡಿದ್ದನ್ನು ವಾಟ್ಸ್‌ ಆ್ಯಪ್‌ ನಂ : 9448889777 ಹಾಗೂ 9448210277 ಗೆ ಕಳುಹಿಸಬಹುದಾಗಿದೆ ಎಂದು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಪಿ. ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.