ADVERTISEMENT

ಮುದ್ದೇಬಿಹಾಳ: ಮೋಡಿ ಮಾಡಿದ ಜಸ್‌ಕರಣ್, ಅನುರಾಧಾ ಭಟ್ ಗಾಯನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 13:52 IST
Last Updated 3 ಜೂನ್ 2025, 13:52 IST
ಮುದ್ದೇಬಿಹಾಳ ಪಟ್ಟಣದ ಹುಡ್ಕೋದ ಗವಿಸಿದ್ದೇಶ್ವರ ವೇದಿಕೆಯಲ್ಲಿ ಮಂಗಳವಾರ ನಡೆದ ಪಿವಿಆರ್ ಇವೆಂಟ್ಸ್‌ನ ರಸಮಂಜರಿ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕ ಜಸಕರಣ್ ಸಿಂಗ್ ಹಾಡಿದರು
ಮುದ್ದೇಬಿಹಾಳ ಪಟ್ಟಣದ ಹುಡ್ಕೋದ ಗವಿಸಿದ್ದೇಶ್ವರ ವೇದಿಕೆಯಲ್ಲಿ ಮಂಗಳವಾರ ನಡೆದ ಪಿವಿಆರ್ ಇವೆಂಟ್ಸ್‌ನ ರಸಮಂಜರಿ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕ ಜಸಕರಣ್ ಸಿಂಗ್ ಹಾಡಿದರು   

ಮುದ್ದೇಬಿಹಾಳ: ಪಟ್ಟಣದ ಗವಿಸಿದ್ದೇಶ್ವರ ವೇದಿಕೆಯಲ್ಲಿ ಮಂಗಳವಾರ ಪಿವಿಆರ್ ಇವೆಂಟ್ಸ್‌ ಹಮ್ಮಿಕೊಂಡಿದ್ದ ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ಹಿನ್ನೆಲೆ ಗಾಯಕಿ ಅನುರಾಧಾ ಭಟ್, ಜಸ್‌ಕರಣ್ ಸಿಂಗ್ ಸೇರಿದಂತೆ ಹಲವು ಗಾಯಕರು ತಮ್ಮ ಸುಮಧುರ ಕಂಠದಿಂದ ನೆರೆದ ಜನಸಮೂಹವನ್ನು ಸಂಗೀತ ಲೋಕದಲ್ಲಿ ತೇಲಾಡಿಸಿದರು.

ಜೇನ ದನಿಯೋಳೆ, ಮೀನ ಕಣ್ಣೋಳೆ... ಸೇರಿದಂತ ಹಲವು ಚಲನಚಿತ್ರ ಗೀತೆಗಳನ್ನು ಹಾಡಿ ರಂಜಿಸಿದರು.

ಮಿಮಿಕ್ರಿ ಗೋಪಿ, ಸಂದೇಶ ನಿರ್ಮಾರ್ಗ, ಪೃಥ್ವಿ ಭಟ್, ವಿಜೆ ಹೇಮಲತಾ, ಪುರುಷೋತ್ತಮ, ರಿಷು ಪುರುಷೋತ್ತಮ, ಶ್ರಾವ್ಯಾ, ಹಮೀಶ ಕುಮಾರ ವಿವಿಧ ಚಲನಚಿತ್ರ ಗೀತೆಗಳಿಗೆ ದನಿಯಾದರು.

ADVERTISEMENT

ಕಾರ್ಯಕ್ರಮದಲ್ಲಿ ಅನ್ನದಾಸೋಹಕ್ಕೆ ದೇಣಿಗೆ ನೀಡಿದ ದಾನಿಗಳನ್ನು ಕಮಿಟಿ ಪರವಾಗಿ ಹಾಗೂ ಜಾತ್ರಾ ಕಮಿಟಿಗೆ ವಿಬಿಸಿ ಮೈದಾನವನ್ನು ಉಚಿತವಾಗಿ ನೀಡಿದ ವೀರಶೈವ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟೀಮನಿ, ಶಾಸಕ ಸಿ.ಎಸ್.ನಾಡಗೌಡ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಮುದ್ದೇಬಿಹಾಳದಲ್ಲಿ ಹಿನ್ನೆಲೆ ಗಾಯಕಿ ಅನುರಾಧಾ ಭಟ್ ತಂಡ ಸಾಮೂಹಿಕ ಹಾಡುಗಳಿಗೆ ದನಿಯಾದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.