ವಿಜಯಪುರ:‘ಅಣ್ತಮ್ಮಂದಿರ ತಂದೆ ಜತೆ ರಾಜಕೀಯ ಮಾಡಿದವನು ನಾನು. ಅವರಿನ್ನೂ ಚಿಕ್ಕವರಿದ್ದಾರೆ. ದೇವರೇ ಬುದ್ದಿ ಕಲಿಸುತ್ತಾನೆ’ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ತಿಳಿಸಿದರು.
‘ಎಂ.ಬಿ.ಪಾಟೀಲ ಇನ್ನೂ ಚಿಕ್ಕವರಿದ್ದಾರೆ. ಮುಂದೆ ಅವರು ಒಂದು ದಿನ ವಿಶ್ರಾಂತಿ ಪಡೆಯಬೇಕು ಎಂಬುದು ಗೊತ್ತಿರಲಿ’ ಎಂದು ಸೋಮವಾರ ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
‘ನನ್ನ ಪ್ರತಿಸ್ಪರ್ಧಿ ಹೆಣ್ಮಗಳಿದ್ದಾರೆ. ಅವರು ಗೆದ್ದರೂ ನನಗೆ ಖುಷಿಯಾಗಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.