ADVERTISEMENT

ವಿಜಯಪುರ: ಕಸಾಪ ನೂತನ ಪದಾಧಿಕಾರಿಗಳ ನೇಮಕ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 12:55 IST
Last Updated 22 ಜನವರಿ 2022, 12:55 IST
ಪ್ರೊ.ಮಹಾದೇವ ರೆಬಿನಾಳ
ಪ್ರೊ.ಮಹಾದೇವ ರೆಬಿನಾಳ   

ವಿಜಯಪುರ:ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಪರಿಷತ್‌ ಅಧ್ಯಕ್ಷಹಾಸಿಂಪೀರ ವಾಲಿಕಾರ ತಿಳಿಸಿದ್ದಾರೆ.

ಗೌರವ ಕಾರ್ಯದರ್ಶಿಯಾಗಿ ಪ್ರೊ.ಮಹಾದೇವ ರೆಬಿನಾಳ ಹಾಗೂ ಕೆ. ಸುನಂದಾ, ಗೌರವ ಕೋಶಾಧ್ಯಕ್ಷರಾದ ಸಂಗಮೇಶ ಮೇತ್ರಿ, ಮಹಿಳಾ ಸಾಹಿತಿಗಳಾಗಿ ವಿದ್ಯಾವತಿ ಅಂಕಲಗಿ ಹಾಗೂ ಇಂದುಮತಿ ಲಮಾಣಿ, ಪರಿಶಿಷ್ಟ ಜಾತಿ ಪ್ರತಿನಿಧಿಯಾಗಿ ಅಭಿಷೇಕ ಚಕ್ರವರ್ತಿ ಹಾಗೂ ಡಾ. ಸುಜಾತಾ ಚಲವಾದಿ, ಪರಿಶಿಷ್ಟ ಪಂಗಡದ ಪ್ರತಿನಿಧಿಯಾಗಿ ಡಿ.ಬಿ. ನಾಯಕ, ಸಂಘ-ಸಂಸ್ಥೆ ಪ್ರತಿನಿಧಿಯಾಗಿ ಸೈಯ್ಯದ್‌ (ದಿಲಾವರ) ಖಾಜಿ, ಜಿಲ್ಲಾ ವಾರ್ತಾ ಇಲಾಖೆ ಅಧಿಕಾರಿ ಸುಲೇಮಾನ್‌ ನದಾಫ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ನಿಕಟಪೂರ್ವ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರನ್ನು ನೇಮಕ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT