ADVERTISEMENT

ವಿಜಯಪುರ ನಗರದಲ್ಲಿ ಭೂಕಂಪನ: 3.5 ತೀವ್ರತೆ ದಾಖಲು

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 7:27 IST
Last Updated 22 ಮಾರ್ಚ್ 2022, 7:27 IST
ವಿಜಯಪುರ ನಗರದಲ್ಲಿ ಭೂಕಂಪನ: 3.5 ತೀವ್ರತೆ ದಾಖಲು
ವಿಜಯಪುರ ನಗರದಲ್ಲಿ ಭೂಕಂಪನ: 3.5 ತೀವ್ರತೆ ದಾಖಲು   

ವಿಜಯಪುರ: ಮಂಗಳವಾರ ಬೆಳಿಗ್ಗೆ 11.21ಕ್ಕೆ ಸಂಭವಿಸಿದ ಭೂಕಂಪನದ ಕೇಂದ್ರ ಬಿಂದು ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮವಾಗಿದೆ.ಜನರು ಆತಂಕಕ್ಕೆ ಒಳಗಾಗಿದ್ದಾರೆ.

ರಿಕ್ಟರ್ ಮಾಪಕದಲ್ಲಿ 3.5ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದ ಪ್ರಕಟಣೆ ತಿಳಿಸಿದೆ.

ಭೂಕಂಪನದಿಂದ ಮನೆ, ಕಟ್ಟಡಗಳಿಗೆ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಆತಂಕಕ್ಕೆ ಒಳಗಾದ ಜನರು ಮನೆಯಿಂದ ಹೊರ ಓಡಿ ಬಂದಿದ್ದಾರೆ.

ADVERTISEMENT

ಕಳೆದ ಮಳೆಗಾಲದಲ್ಲಿ ಜಿಲ್ಲೆಯ ಹಲವೆಡೆ ಆಗಾಗ ಭೂಕಂಪನದ ಅನುಭವವಾಗಿತ್ತು, ಜನರು ಆತಂಕಕ್ಕೆ ಒಳಗಾಗಿದ್ದರು. ಸುಮಾರು ನಾಲ್ಕೈದು ತಿಂಗಳ ಬಳಿಕ ಇದೀಗ ಭೂಕಂಪನದ ಅನುಭವವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.