ADVERTISEMENT

ವಿಜಯಪುರ: ಮುಂದುವರೆದ ಮಳೆ ಆರ್ಭಟ; ಅಂಗಡಿಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 11:14 IST
Last Updated 10 ಸೆಪ್ಟೆಂಬರ್ 2020, 11:14 IST
ಅಂಗಡಿಯಿಂದ ನೀರನ್ನು ಹೊರಗೆ ಚೆಲ್ಲುತ್ತಿರುವುದು
ಅಂಗಡಿಯಿಂದ ನೀರನ್ನು ಹೊರಗೆ ಚೆಲ್ಲುತ್ತಿರುವುದು   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ನಾಲ್ಕನೇ ದಿನವಾದ ಗುರುವಾರವೂ ವರುಣನ ಆರ್ಭಟ ಜೋರಾಗಿತ್ತು. ಬುಧವಾರ ತಡರಾತ್ರಿ ಮತ್ತು ಗುರುವಾರ ಬೆಳಿಗ್ಗೆ ಗುಡುಗು, ಗಾಳಿಯೊಂದಿಗೆ ಮಳೆ ಸುರಿಯಿತು.

ಮುದ್ದೇಬಿಹಾಳ ಪಟ್ಟಣದ ಬಸವೇಶ್ವರ ಸರ್ಕಲ್‌ನಲ್ಲಿ ಐದಾರು ಕಿರಾಣಿ ಅಂಗಡಿಗಳಿಗೆ ನೀರು ನುಗ್ಗಿ ವ್ಯಾಪಾರಸ್ಥರು ಸಮಸ್ಯೆ ಅನುಭವಿಸಿದರು. ತಾಳಿಕೋಟೆಯಲ್ಲಿ ಡೋಣಿ ಪ್ರವಾಹ ಅಲ್ಪಮಟ್ಟಿಗೆ ತಗ್ಗಿದ್ದು, ಹಡಗಿನಾಳ ಸಂಪರ್ಕಿಸುವ ಸೇತುವೆ ಜನ ಸಂಚಾರಕ್ಕೆ ಮುಕ್ತವಾಗಿದೆ.

ಮೂರ್ನಾಲ್ಕು ದಿನಗಳಿಂದ ಭಾರೀ ಮಳೆಯಾಗಿರುವ ಪರಿಣಾಮ ಡೋಣಿ ನದಿ ತೀರದ ಕೆಲವೆಡೆ ಹೊಲಗಳಿಗೆ ನೀರು ನುಗ್ಗಿರುವುದರಿಂದ ಬೆಳೆ ಹಾನಿಯಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ರಾಜಶೇಖರ್‌‌ ತಿಳಿಸಿದರು.

ADVERTISEMENT

ಮಳೆ ವಿವರ:ಬಸವನ ಬಾಗೇವಾಡಿಯಲ್ಲಿ 57.2 ಮಿ.ಮೀ. ಮಳೆಯಾಗಿದೆ. ಮನಗೂಳಿ 45, ಆಲಮಟ್ಟಿ 11.4, ಹೂವಿನ ಹಿಪ್ಪರಗಿ 20.4, ಅರೇಶಂಕರ 10, ಮಟ್ಟಿಹಾಳ 25, ವಿಜಯಪುರ 30.2, ಭೂತನಾಳ 16.8, ಹಿಟ್ನಳ್ಳಿ 42, ಮಮದಾಪೂರ 71.4, ಕುಮಟಗಿ 2.4, ಬಬಲೇಶ್ವರ 36.4, ನಾದ ಬಿ.ಕೆ 1, ಅಗರಖೇಡ 56.2, ಹಲಸಂಗಿ 36, ಚಡಚಣ 29, ಝಳಕಿ 9.1, ಮುದ್ದೇಬಿಹಾಳ 48.5, ನಾಲತವಾಡ 20.8, ತಾಳಿಕೋಟಿ 45, ಢವಳಗಿ 10.4, ಸಿಂದಗಿ 2, ಆಲಮೇಲ 0.8, ರಾಮನಹಳ್ಳಿ 1.2, ಕೊಂಡಗೂಳಿ 39.4 ಮಿ.ಮೀ.ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.