ADVERTISEMENT

ಸಂತ್ರಾ ಬೆಳೆದು ಲಾಭ ಗಳಿಸಿದ ರೈತ

ಜತ್ತ ತಾಲ್ಲೂಕಿನ ಮೊರಬಗಿ ಗ್ರಾಮದ ರೈತನ ಯಶೋಗಾಥೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 5:03 IST
Last Updated 6 ಫೆಬ್ರುವರಿ 2026, 5:03 IST
ಜತ್ತ ತಾಲ್ಲೂಕಿನ ಮೊರಬಗಿ ಗ್ರಾಮದ ಪ್ರಗತಿ ಪರ ರೈತ ಸೂರ್ಯಕಾಂತ ತೀರ್ಥ ಅವರು ಹೊಲದಲ್ಲಿ ಬೆಳೆದಿರುವ ಸಂತ್ರಾ ಹಣ್ಣಿನ ಗಿಡಗಳು
ಜತ್ತ ತಾಲ್ಲೂಕಿನ ಮೊರಬಗಿ ಗ್ರಾಮದ ಪ್ರಗತಿ ಪರ ರೈತ ಸೂರ್ಯಕಾಂತ ತೀರ್ಥ ಅವರು ಹೊಲದಲ್ಲಿ ಬೆಳೆದಿರುವ ಸಂತ್ರಾ ಹಣ್ಣಿನ ಗಿಡಗಳು   

ಹೊರ್ತಿ: ಸಮೀಪದ ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಮೊರಬಗಿ ಗ್ರಾಮದ ರೈತ ಸೂರ್ಯಕಾಂತ ತೀರ್ಥ ಅವರು ಸಂತ್ರಾ (ಕಿತ್ತಳೆ) ಹಣ್ಣು ಬೆಳೆದು ಲಾಭ ಗಳಿಸುತ್ತಿದ್ದಾರೆ.

ಮೂರು ವರ್ಷದ ಹಿಂದೆ ಮಹಾರಾಷ್ಟ್ರದ ಪುಣೆಯಿಂದ ₹250ಕ್ಕೆ ಒಂದರಂತೆ 2,500 ಸಸಿಗಳನ್ನು ತಂದು ಮೂರು ಎಕರೆಯಲ್ಲಿ ನಾಟಿ ಮಾಡಿ, ಹನಿ ನೀರಾವರಿ ಮೂಲಕ ಬೆಳೆಯನ್ನು ಬೆಳೆಯಲಾಗಿದೆ.  

ಸಂತ್ರಾಕ್ಕೆ ವರ್ಷದಲ್ಲಿ ಒಂದೇ ಸಲ ಔಷಧ ಬಳಕೆ ಮಾಡಲಾಗುತ್ತಿದೆ. ಈ ಹಣ್ಣು ಪ್ರತಿ ಕೆ.ಜಿ.ಗೆ ₹30ರಿಂದ ₹40ರ ವರೆಗೆ ಅಥಣಿ ಮತ್ತು ವಿಜಯಪುರ ಜಿಲ್ಲೆಯ ಸಂತೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ADVERTISEMENT

ವ್ಯಾಪಾರಸ್ಥರೇ ನಮ್ಮ ತೋಟಕ್ಕೆ ಬಂದು ಖರೀದಿಸುತ್ತಾರೆ. ಈ ಸಲ ಒಟ್ಟು 12 ಟನ್ ಸಂತ್ರಾ ಹಣ್ಣು ಬೆಳೆಯಲಾಗಿದೆ. ₹4ಲಕ್ಷ ಲಾಭ ತಂದುಕೊಂಡಿದ್ದೇವೆ ಎನ್ನುತ್ತಾರೆ ಪ್ರಗತಿಪರ ರೈತ ಸೂರ್ಯಕಾಂತ ತೀರ್ಥ. ಮಾಹಿತಿಗಾಗಿ ಅವರ ಮೊಬೈಲ್ ನಂ 9986799133 ಗೆ ಸಂಪರ್ಕಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.