ತಾಳಿಕೋಟೆ: ತಾಲ್ಲೂಕಿನ ಸಾಸನೂರ ಗ್ರಾಮದ ಹಣಮಂತ್ರಾಯ ಮಲ್ಲಣ್ಣ ಅವರು ತಮ್ಮ 20 ಎಕರೆ ತೊಗರಿ ಹೊಲವನ್ನು 9 ತಾಸಿನಲ್ಲಿ ಉಳುಮೆ (ಗಳೇ ಹೊಡೆದು) ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಇವರ ಹಾಗೂ ಇವರ ಎತ್ತುಗಳ ಈ ಸಾಹಸವನ್ನು ಮೆಚ್ಚಿ ಗ್ರಾಮಸ್ಥರು ಊರಿನ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗೌರವಿಸಿದ್ದಾರೆ.
ನಂತರ ಆರಾಧ್ಯ ದೈವ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಊರಿನ ಪ್ರಮುಖರಾದ ಅಮರೇಶ ಗುಡಗುಂಟಿ, ಬಾಪುಗೌಡ ಅಂಬಳ್ಳಿ, ಆನಂದ ಪಾಟೀಲ, ದೇವಿಂದ್ರ ಮೋಸವಳಗಿ, ಪ್ರಭು ದ್ಯಾಪುರ, ಬಸಣ್ಣ ಬಳಗಾರ, ಮುದಕಪ್ಪ ದ್ಯಾಪುರ, ರೇವಣಸಿದ್ಧ ದ್ಯಾಮಗೊಂಡ, ಆನಂದ ತೋಟದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.