ಸಿಂದಗಿ:ಕೃಷಿ ಕೂಲಿಕಾರರ ಪುತ್ರ ಮಾಳಪ್ಪ ನಿಂಗಪ್ಪ ಹೊಸಮನಿ ದ್ವಿತೀಯ ಪಿಯುಸಿ ಕಲಾ ವಿಭಾಗ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.
ಪಟ್ಟಣದ ಬಸವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಜ್ಞಾನ ಭಾರತಿ ಪಿಯು ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದರು. ಒಟ್ಟು 586 (ಶೇ 97.66) ಅಂಕಗಳನ್ನು ಪಡೆದಿದ್ದಾರೆ, ಕನ್ನಡ ಹಾಗೂ ಶಿಕ್ಷಣಶಾಸ್ತ್ರ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ, ಹಿಂದಿ 98, ಇತಿಹಾಸ 98, ಸಮಾಜಶಾಸ್ತ್ರ 97, ರಾಜ್ಯಶಾಸ್ತ್ರದಲ್ಲಿ 93 ಅಂಕ ಗಳಿಸಿದ್ದಾರೆ.
ಫಲಿತಾಂಶ ಪ್ರಕಟವಾದ ಸಂದರ್ಭದಲ್ಲಿ ಮಾಳಪ್ಪ ತನ್ನ ತಂದೆ, ತಾಯಿ ಜೊತೆಗೆ ಕೃಷಿ ಕೆಲಸದಲ್ಲಿದ್ದರು. ‘ಕೆಎಎಸ್ ಪಾಸು ಮಾಡಬೇಕೆಂಬ ಆಸೆ ಇದೆ. ಕಾಲೇಜಿನವರ ಪ್ರೋತ್ಸಾಹ ಮತ್ತು ದಿನದಲ್ಲಿ ಹತ್ತು ಗಂಟೆ ಓದುತ್ತಿದ್ದರಿಂದ ಈ ಫಲಿತಾಂಶ ಸಾಧ್ಯವಾಗಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.